September 7, 2024

ಮದ್ದೂರಿನಿಂದ ಗೌಡಗೆರೆ ಚಾಮುಂಡೇಶ್ವರಿ ದೇಗುಲಕ್ಕೆ KSRTC ಬಸ್.!

1 min read

ರಾಮನಗರ – ಚನ್ನಪಟ್ಟಣ : ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಬಸವಪ್ಪನವರ ಶ್ರೀ ಕ್ಷೇತ್ರಕ್ಕೆ ದಿನೆ ದಿನೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದೇವಿ ಪವಾಡ, ಶಕ್ತಿಗೆ ಮನಸೋತ ಭಕ್ತರು, ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಭಕ್ತರ ಅನುಕೂಲಕ್ಕೆ ಮದ್ದೂರಿನಿಂದ ಗೌಡಗೆರೆಗೆ ಕೆಎಸ್‌ಆರ್‌ಟಿಸಿ ಬಸ್ ಸಂಪರ್ಕ ಕಲ್ಪಿಸಲಾಗಿದೆ.

ಹೌದು, ಮದ್ದೂರಿನಿಂದ ಗೌಡಗೆರೆ ಚಾಮುಂಡೇಶ್ವರಿ ದೇಗುಲಕ್ಕೆ ಕೆಎಸ್‌ಆರ್‌ಟಿಸಿಯಿಂದ ಈ ಬಸ್ ಸಂಪರ್ಕ‌ ಕಲ್ಪಿಸಲಾಗಿದ್ದು, ದಿನೆ ದಿನೆ ಗೌಡಗೆರೆ ಚಾಮುಂಡೇಶ್ವರಿ ದೇಗುಲ ಅಭಿವೃದ್ಧಿ ಹೊಂದುತ್ತಿದ್ದು, ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಮದ್ದೂರು ಶಾಸಕ ಉದಯ್ ಗೌಡ ಅವ್ರಿಂದ ಮದ್ದೂರು ಬಸ್ ಈ ಮಾರ್ಗದ ನೂತನ ಬಸ್‌ಗೆ ಹಸಿರು ನಿಶಾನೆ ತೋರಿಸಿದರು.

ಇದೇವೇಳೆ ಕೆಎಸ್ಆರ್‌ಟಿಸಿ ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾಗರಾಜು, ಮದ್ದೂರು ಘಟಕ ವ್ಯವಸ್ಥಾಪಕರಾದ ಮುತ್ತುರಾಜ ಸಂಚಾರಿ ನಿಯಂತ್ರಕರಾದ ಚೆನ್ನಕೇಶವ, ರಘು, AWS ಶ್ರೀಕಾಂತ್, ಎಚ್‌ಪಿ ಚಂದ್ರು ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *