ಜೆ.ಎಸ್.ಎಸ್ ಪಬ್ಲಿಕ್ ಶಾಲೆಯಲ್ಲಿ ಲಸಿಕಾ ಅಭಿಯಾನ ಮುಂದುವರಿಕೆ
1 min read![](https://nannurumysuru.com/wp-content/uploads/2021/06/image-1-8.jpg)
ಮೈಸೂರು: ಮೈಸೂರಿನ ಜೆ.ಎಸ್.ಎಸ್ ಪಬ್ಲಿಕ್ ಶಾಲೆ ವಿನಯ ಮಾರ್ಗ ರಸ್ತೆಯ ಸಿದ್ದಾರ್ಥ ನಗರದಲ್ಲಿ ಮಾನ್ಯ ಶಾಸಕರಾದ ಎಸ್.ಎ ರಾಮದಾಸ್ ಅವರ ನೇತೃತ್ವದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮದ ಉದ್ಘಾಟನೆ ನಡೆದಿತ್ತು. ಅದರಂತೆ ಇಂದು ಕೂಡ ವಾರ್ಡ್ ನಂ.53 ರ ವಿನಯ ಮಾರ್ಗದಲ್ಲಿರುವ ಜೆ.ಎಸ್.ಎಸ್ ಶಾಲೆಯಲ್ಲಿ ಲಸಿಕಾ ಅಭಿಯಾನ ಮುಂದುವರಿಕೆಯಾಗಿದೆ.
ಇಂದು ಸಹ ಶಾಸಕರಾದ ರಾಮದಾಸ್ ಅವರ ನೇತೃತ್ವದಲ್ಲಿ ಲಸಿಕಾ ಅಭಿಯಾನ ನಡೆಯುತ್ತಿದ್ದು, ಲಸಿಕಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹಲವು ಯುವಕರನ್ನ ಮಾತನಾಡಿಸಿ ನಿಮ್ಮ ಅಕ್ಕಪಕ್ಕದ ಮನೆಯಲ್ಲಿ ಇನ್ನೂ ಲಸಿಕೆ ತೆಗೆದುಕೊಳ್ಳದಿದ್ದಲ್ಲಿ ಅಂಥವರನ್ನು ಕರೆದುಕೊಂಡು ಬಂದು ಲಸಿಕೆ ಹಾಕಿಸಿ ಎಂದು ಕರೆ ಕೊಟ್ಟರು.
![](https://nannurumysuru.com/wp-content/uploads/2023/09/Nayana-Kumars.jpg)
ಕೆ.ಆರ್ ಕ್ಷೇತ್ರದಲ್ಲಿ ನಡೆದ ಎರಡು ದಿನಗಳು ನಡೆದ ಲಸಿಕಾ ಅಭಿಯಾನದಲ್ಲಿ ಸುಮಾರು 9720 ಜನರಿಗೆ ಲಸಿಕೆ ನೀಡಲಾಗಿದೆ.
![](https://nannurumysuru.com/wp-content/uploads/2021/06/WhatsApp-Image-2021-06-22-at-7.34.15-PM-1024x682.jpeg)
ವಿಶೇಷವಾಗಿ ಲಸಿಕಾ ಅಭಿಯಾನ ಚೆನ್ನಾಗಿ ನಡೆಯಬೇಕಾದರೆ ಆರೋಗ್ಯ ಸಿಬ್ಬಂದಿ, ವೈದ್ಯರು , ಪೊಲೀಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸ್ವಯಂಸೇವಕರ ಪಾತ್ರ ಬಹುದೊಡ್ಡದಿರುತ್ತದೆ ಆ ಕಾರಣಕ್ಕಾಗಿ ಅವರಿಗೆಲ್ಲ ಸನ್ಮಾನ ಮಾಡುವ ಕೆಲಸವನ್ನು ಶಾಸಕ ರಾಮದಾಸ್ ನೆರವೇರಿಸಿದರು.
ಇನ್ನು ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಶ್ರೀಮತಿ ರೂಪ, ಸ್ವಯಂಸೇವಾ ಸಂಸ್ಥೆಯ ಸ್ವಯಂಸೇವಕರು ಹಾಜರಿದ್ದರು. ವಿಶೇಷವಾಗಿ ಬಿಜೆಪಿ ಕೆ.ಆರ್ ಕ್ಷೇತ್ರದ ಪದಾಧಿಕಾರಿಗಳು ನೆರೆದಿದ್ದವರಿಗೆ ಕೋವಿಡ್ ಮಾರ್ಗಸೂಚಿ ಪಾಲಿಸುವಲ್ಲಿ ಸಹಾಯ ಮಾಡಿದರು.