ಕೆರಳದ ಕಾಸರಗೂಡಿನಲ್ಲಿ ಕನ್ನಡವನ್ನ ಸಂಪೂರ್ಣವಾಗಿ ನಿರ್ನಾಮ ಮಾಡುವ ಹುನ್ನಾರ ನಡೆಯುತ್ತಿದೆ

1 min read

ಮೈಸೂರು: ಕೆರಳದ ಕಾಸರಗೂಡಿನಲ್ಲಿ ಊರುಗಳ ಹೆಸರನ್ನ ಮಳೆಯಾಳಿಗೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಅವರು ಪ್ರತಿಕ್ರಿಯೆ ನೀಡಿದ್ದು, ಕಾಸರಗೂಡಿನಲ್ಲಿ ಕನ್ನಡವನ್ನ ಸಂಪೂರ್ಣವಾಗಿ ನಿರ್ನಾಮ ಮಾಡುವ ಹುನ್ನಾರ ನಡೆಯುತ್ತಿದೆ ಅಂತ ಹೇಳಿದ್ದಾರೆ.

ಈ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು, ಸಾಹಿತಿಗಳು, ರಾಜಕೀಯ ಪಕ್ಷಗಳು ಧ್ವನಿ ಎತ್ತಬೇಕು. ಕೇರಳ ಸರ್ಕಾರದ ಜೊತೆ ಕರ್ನಾಟಕ ಸರ್ಕಾರ ಒತ್ತಡ ಹಾಕಿ ಈ ಕೆಲಸ ತಡೆಯಬೇಕು. ಕಾಸರಗೂಡು ಕರ್ನಾಟಕದ್ದು- ಆದರು ಇಷ್ಟು ವರ್ಷಗಳಿಂದ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದೇವೆ. ಆದರೆ ಈಗ ಅಲ್ಲಿನ ಸರ್ಕಾರ, ಆ ಭಾಗದಿಂದ ಕನ್ನಡವನ್ನೇ‌ ಸಂಪೂರ್ಣ ನಾಶ ಮಾಡಲು ಪ್ರಯತ್ನ ಮಾಡುತ್ತಿದೆ. ಇದನ್ನು ಇನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ಒತ್ತಡದ ಧ್ವನಿ ಕೇಂದ್ರ ಸರ್ಕಾರದ ವರೆಗು ತಲುಪಿಸಬೇಕು. ಈ ವಿಚಾರದಲ್ಲಿ ಸ್ವಾಭಿಮಾನಿ‌ ಕನ್ನಡಿಗರಾಗಿ ಹೋರಾಟದ ಧ್ವನಿ ಜೋರು ಮಾಡಬೇಕು ಅಂತ ಹೇಳಿದರು.

ಲಸಿಕಾ ಉತ್ಸವದಲ್ಲಿ ಪ್ರಧಾನಮಂತ್ರಿ ಸಿಎಂ ಫೋಟೋ ಹಾಕಿರೋ ವಿಚಾರ. ಇದಕ್ಕೆ ವಿಪಕ್ಷದಿಂದ ಆಕ್ಷೇಪ ವಿಚಾರ:

ಹಿಂದೆ ಉಪ್ಪು, ಸಕ್ಕರೆ ಅಕ್ಕಿ ಏನೇ ಕೊಟ್ಟರು ಅದರ ಮೇಲೆ ಅವರ ಫೋಟೋ ಇರ್ಲಿಲ್ವ. ಯಾವುದೇ ಸರ್ಕಾರ ಇರಲಿ – ಆಯಾ ಸಂದರ್ಭದ ಯೋಜನೆಗಳಿಗೆ. ಜನಪ್ರತಿನಿಧಿಗಳ ಫೋಟೋ ಹಾಕಿಕೊಳ್ಳೊದು ವಾಡಿಕೆ ರೀತಿ ಬಂದಿದೆ. ಪಕ್ಷದ ಬಾವುಟ ಹಾಕಿಕೊಳ್ಳುವುದು ತಪ್ಪು. ಸರ್ಕಾರದ ಭಾಗವಾಗಿರದವರ ಫೋಟೋ ಹಾಕುವುದು ತಪ್ಪು. ಆದರೆ ಜನಪ್ರತಿನಿಧಿಗಳ ಫೋಟೋ ಹಾಕುವುದರಲ್ಲಿ ಯಾವ ತಪ್ಪು ಇಲ್ಲ ಎಂದರು.

ಇನ್ನು ಕೇಂದ್ರ ಸಚಿವ ಸಂಪುಟಕ್ಕೆ ಸಂಸದ ಪ್ರತಾಪ್ ಸಿಂಹ ಹೆಸರು ಪ್ರಸ್ತಾಪ ವಿಚಾರಕ್ಕೆ ಸಂಬಂದಿಸಿದಂತೆ ಅವರು ಗುಟ್ಟು ಬಿಟ್ಟುಕೊಡುತ್ತಿಲ್ಲ. ಮೈಸೂರು-ಕೊಡಗು ಜನ ನನಗೆ ಸಂಸದನ ಸ್ಥಾನ ನೀಡಿದ್ದಾರೆ, ನನಗಿಷ್ಟೇ ಸಾಕು. ಸಂಸದನಾದ ಮೇಲೆ ಮಿನಿಸ್ಟರ್ ಆಗಬೇಕು ನಂತರ ಸಿಎಂ ಆಗ್ಬೇಕು ಅನ್ನೋ ಆಸೆಗಿಂತ. ಕೊಟ್ಟಿರುವ ಸ್ಥಾನದಲ್ಲಿ ಮುಂದುವರಿಯುವುದು ಉತ್ತಮ. ಜನರ ಕೆಲಸ ಮಾಡಲಿ ಅಂತ ನಮ್ಮನ್ನ ನೇಮಕ ಮಾಡೋದು. ಒಂದರ ನಂತರ ಒಂದು ಸ್ಥಾನಕ್ಕೆ ಆಸೆ ಪಡುವ ಬದಲು ಇರುವ ಹುದ್ದೆಯಲ್ಲೇ ಕೆಲಸ ಮಾಡಬೇಕು. ಜನರ ಕೆಲಸ ಮಾಡಲು ನನಗೆ ಕೊಟ್ಟಿರುವ ಸ್ಥಾನವೇ ಸಾಕು ಅಂತ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *