ಮೈಸೂರಿನ ಕೋವಿಡ್ ಸೆಂಟರ್ನಲ್ಲಿ ಸಂಗೀತ ರಸಸಂಜೆ: ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ತಾಲೂಕು ಆಡಳಿತ
1 min read![](https://nannurumysuru.com/wp-content/uploads/2021/05/image-1.jpg)
ಮೈಸೂರು: ಮೈಸೂರಿನ ಕೋವಿಡ್ ಸೆಂಟರ್ನಲ್ಲಿ ಸಂಗೀತ ರಸಸಂಜೆ ಏರ್ಪಡಿಸಿ ಕೊರೊನಾ ಸೋಂಕಿತರಿಗೆ ತಾಲೂಕು ಆಡಳಿತ ಆತ್ಮಸ್ಥೈರ್ಯ ತುಂಬಿದೆ.
ಹುಣಸೂರಿನ ಬಾಚಹಳ್ಳಿ ರಸ್ತೆಯ ಅದರ್ಶ ಶಾಲೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ತಾಲೂಕು ಆಡಳಿತದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
![](https://nannurumysuru.com/wp-content/uploads/2023/09/Nayana-Kumars.jpg)
ರಸ ಸಂಜೆ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಬಸವರಾಜ್, EO ಗಿರೀಶ್ ಹಾಗೂ ಇತರ ಕಲಾವಿದರು ಹಾಡು ಹಾಡಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಹುಣಸೂರು ಶಾಸಕ ಎಚ್.ಪಿ ಮಂಜುನಾಥ್, ತಾಲ್ಲೂಕು ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಭಾಗಿಯಾಗಿದ್ದರು.