ನಂಜನಗೂಡಲ್ಲಿ ಮುಡಿ ಸೇವೆ ತಾತ್ಕಾಲಿಕ ಸ್ಥಗಿತ!

1 min read

ಮೈಸೂರು – ನಂಜನಗೂಡು : ಕಬಿನಿ ಜಲಾಶಯದಿಂದ ಬರೋಬ್ಬರಿ 30 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡುತ್ತಿರುವ ಕಾರಣ ನಂಜನಗೂಡಿನ ಕಪಿಲಾ ನದಿಯ ಸ್ನಾನ ಘಟ್ಟ ಮುಳುಗಡೆಯತ್ತ ಸಾಗಿದೆ. ಈಗಾಗಲೇ ನಾಲ್ಕೈದು ಮೆಟ್ಟಿಲು ಮುಳುಗಡೆ ಕಂಡಿದ್ದು ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಉಂಟಾಗಿದೆ.

ಮುಡಿ ಸೇವೆ ಮುಗಿಸಿ ಸ್ನಾನ ಮಾಡುತ್ತಿರುವ ಭಕ್ತರು

ಈ ಕಾರಣ ನಂಜನಗೂಡಿಗೆ ಆಗಮಿಸುವ ಭಕ್ತರು ನದಿಗೆ ಇಳಿಯದಂತೆ ಸೂಚನೆ ನೀಡಿದ್ದು ನದಿ ತೀರದ ಬಳಿ ಮಾಡುತ್ತಿರುವ ಮುಡಿಸೇವೆಯನ್ನ ತಾತ್ಕಾಲಿಕವಾಗಿ ನೀರಿನ ಪ್ರಮಾಣ ಕಡಿಮೆ ಆಗುವವರೆಗು ರದ್ದು ಮಾಡಿರುವುದಾಗಿ ನಂಜನಗೂಡಿನ ಕಾರ್ಯ ನಿರ್ವಾಹಕ ಅಧಿಕಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಈ‌ ಮೂಲಕ ಮುಡಿ ಸೇವೆ ಸದ್ಯಕ್ಕೆ ತಾತ್ಕಾಲಿಕ ಬಂದ್ ಮಾಡಿದ್ದು ಭಕ್ತರ ಸಹಕರಿಸುವಂತೆ ಸೂಚಿಸಲಾಗಿದೆ.

About Author

Leave a Reply

Your email address will not be published. Required fields are marked *