ಪಿಎಂ ಕೇರ್‌ನಿಂದ ಮೈಸೂರಿಗೆ ಆಕ್ಸಿಜನ್ ಜನರೇಟರ್ ಯೂನಿಟ್ ಸಿಗಲಿದೆ: ಪ್ರತಾಪ್ ಸಿಂಹ

1 min read

ಮೈಸೂರು: ಪಿಎಂ ಕೇರ್‌ನಿಂದ ಮೈಸೂರಿಗೆ ಆಕ್ಸಿಜನ್ ಜನರೇಟ್ ಯೂನಿಟ್ ಸಿಗಲಿದೆ ಅಂತ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರಿನಲ್ಲಿ ಒಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪಿಎಂ ಕೇರ್‌ನಿಂದ ಮೈಸೂರಿಗೆ ಆಕ್ಸಿಜನ್ ಜನರೇಟ್ ಯೂನಿಟ್ ಸಿಗಲಿದೆ. ನಿಮಿಷಕ್ಕೆ 1000KL ಆಕ್ಸಿಜನ್ ಉತ್ಪಾದಿಸುವ ಯೂನಿಟ್ ಇದಾಗಿದೆ. ಅದನ್ನ ಕೆ.ಆರ್.ಆಸ್ಪತ್ರೆ ಅಥವ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಲಾಗುವುದು. ಇದಲ್ಲದೆ ಮುಡಾದಿಂದ ತುಳಿಸಿ ದಾಸಪ್ಪ‌ ಆಸ್ಪತ್ರೆಗು ಆಕ್ಸಿಜನ್ ಜನರೇಟರ್ ಯೂನಿಟ್ ಸಿಗಲಿದೆ. ಇನ್ನೊಂದು ತಿಂಗಳಲ್ಲಿ ಮೈಸೂರಿನ ಎಲ್ಲ ತಾಲ್ಲೂಕಿನಲ್ಲು ಆಕ್ಸಿಜನ್ ಜನರೇಟರ್ ಯೂನಿಟ್ ಅಳವಡಿಸಲಾಗುವುದು. ಹೀಗಾಗಿ ಮುಂದಿನ ತಿಂಗಳ ಹೊತ್ತಿಗೆ‌ ಮೈಸೂರಿನಲ್ಲಿ ಆಕ್ಸಿಜನ್ ಸಮಸ್ಯೆ ಇರೋಲ್ಲ ಅಂತ ಹೇಳಿದರು.

ಕಂಪ್ಲಿಟ್ ಲಾಕ್‌ಡೌನ್ ಮಾಡಲು ಸೂಚಿಸಿದೆ

ಉಸ್ತುವಾರಿ ಸಚಿವರು ಗ್ರಾಮಾಂತರ ಭಾಗಕ್ಕೆ ಭೇಟಿ ನೀಡಿದ್ದರು‌. ಗ್ರಾಮಾಂತರ ಭಾಗದಲ್ಲಿ‌ ಸೋಂಕು ಹೆಚ್ಚಳ ಆಗಿದೆ ಅನ್ನೋದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ಸಲಹೆ ಪಡೆದಿದ್ದರು. ಇದಕ್ಕಾಗಿ ಜಿಲ್ಲಾಧಿಕಾರಿಗೆ ಸೂಚನೆ ಕೊಟ್ಟು ಕಂಪ್ಲಿಟ್ ಲಾಕ್‌ಡೌನ್ ಮಾಡಲು ಸೂಚಿಸಿದೆ. ವಾರದಲ್ಲಿ ಎರಡು ದಿನ ಮಾತ್ರ ವ್ಯಾಪಾರಕ್ಕೆ ಅವಕಾಶ. ಉಳಿದ 5 ದಿನ ಕಂಪ್ಲಿಟ್ ಲಾಕ್‌ಡೌನ್ ಇರಲಿದೆ. ಈವರೆಗಿನ ಲಾಕ್‌ಡೌನ್ ವ್ಯವಸ್ಥೆಯಲ್ಲಿ ನಮಗೆ ಸರಿಯಾದ ನಿಯಂತ್ರಣ ಆಗಿಲ್ಲ. ಇದಕ್ಕಾಗಿ ಕಂಪ್ಲಿಟ್ ಲಾಕ್‌ಡೌನ್ ಅನಿವಾರ್ಯ ಆಗಿದೆ.

ಈ ಲಾಕ್‌ಡೌನ್‌ನಲ್ಲಿ ಜನ ಹೊರಗಡೆ ಬರೋದು ಬೇಡ. ಬಂದು ಪೊಲೀಸರು ಹೊಡೆದರು, ಅಥವ ತಡೆದರೂ ಅಂತ ಆರೋಪ ಮಾಡಬೇಡಿ. ಸುಮ್ಮನೆ ದೂರು ಕೊಟ್ಟು ಸಮಯ ವ್ಯರ್ಥ ಮಾಡಬೇಡಿ. ಪರೋಕ್ಷವಾಗಿ ಪೊಲೀಸರು ಹೊಡೆದರೂ ನಾವು ಬರೋಲ್ಲ ಅಂತ ಪ್ರತಾಪ್‌ಸಿಂಹ ಸಂದೇಶ ನೀಡಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಧಕ್ಕೆ ಉಂಟು ಮಾಡುವ ಕೆಲಸ ಮಾಡಬೇಡಿ. ಮೈಸೂರಿಗರು ಇದಕ್ಕೆ ಸಹಕಾರ ಕೊಡ್ತಾರೆ ಅನ್ನೋ ವಿಶ್ವಾಸ ಇದೆ. ಜನರು ಕಂಪ್ಲಿಟ್ ಲಾಕ್‌ಡೌನ್ ಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.

ಟೆಸ್ಟಿಂಗ್ ಕಡಿಮೆ ಮಾಡಿದ್ದು ಸೋಂಕು‌ ಹರಡಲು ಕಾರಣ ಆಯ್ತು.ಇದನ್ನ‌ ಮುಕ್ತವಾಗಿ ನಾನು‌ ಒಪ್ಪಿಕೊಳ್ಳುತ್ತೆನೆ. ನಾವು ಟೆಸ್ಟ್ ಕಡಿಮೆ ಮಾಡಬಾರದಿತ್ತು. ಇದು ಸ್ವಲ್ಪ ಸೋಂಕು ಹೆಚ್ಚಾಗಲು ಕಾರಣ ಆಯ್ತು. ನಮ್ಮ ಹಾಗೂ ಜನರ ನಿರ್ಲಕ್ಷ್ಯದಿಂದ ಇದು ನಡೆದಿದೆ. ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಹರಡಿಬಿಟ್ಟಿದೆ. ಇದಕ್ಕೆ ಕೋವಿಡ್‌ ಮಿತ್ರ ಮೂಲಕ ಪರಿಹಾರ ಹುಡುಕಿದ್ದೇವೆ. ವಾಕ್ಸಿನೆಷನ್ ಬಗ್ಗೆ ಕೂಡ ಜನರಲ್ಲಿ‌ ಗೊಂದಲ ಇತ್ತು. ಇದೇಲ್ಲದರ ಪರಿಣಾಮ ಹಿಂದಿನ ಲಾಕ್‌ಡೌನ್‌ನಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ನಾವು ಪಂಚಸೂತ್ರ ಯೋಜನೆ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದರು.

ಪಾಸಿಟಿವ್ ಬಂದ ಮೇಲೆ ಕಡ್ಡಾಯವಾಗಿ ಕೋವಿಡ್ ಸೆಂಟರ್‌ಗೆ ಬರಬೇಕು. ಬರದೆ ಇದ್ದರೆ ಬಲವಂತವಾಗಿ ಎತ್ತಾಕೊಂಡು ಬರಬೇಕಾಗುತ್ತದೆ. ಹೋಂ ಐಸೋಲೇಷನ್ ಅನ್ನ ಕಡ್ಡಾಯವಾಗಿ ರದ್ದು ಮಾಡ್ತಿವಿ. ಯಾರೇ ಆಗಲಿ ಆಸ್ಪತ್ರೆ ಅಥವ ಕೋವಿಡ್ ಸೆಂಟರ್ ಬರಬೇಕು. ಇನ್ನುಮೇಲೆ ಯಾರು ಸಬೂಬು ಹೇಳುವಂತಿಲ್ಲ ಎಂದು ಹೇಳಿದರು.

ಆಡಳಿತ ಯಂತ್ರ ದಾರಿ ತಪ್ಪಿದ ಮೇಲೆ ಜನಪ್ರತಿನಿಧಿಗಳಿಗೆ ಜವಬ್ದಾರಿ ಕೊಡಲಾಯಿತು. ಇದನ್ನ ರಾಜ್ಯಮಟ್ಟದಲ್ಲು ಮಾಡಿದ್ದರು. ಉಸ್ತುವಾರಿ ಸಚಿವರು ಜಿಲ್ಲಾಮಟ್ಟದಲ್ಲು ಮಾಡಿ‌ ನಮ್ಮನ್ನ ನೇಮಕ‌ ಮಾಡಿದ್ರು. ನಾನು ಹೆಮ್ಮೆಯಿಂದ ಹೇಳ್ತಿನಿ ನಾವು ಜವಬ್ದಾರಿ ವಹಿಸಿಕೊಂಡ ಮೇಲೆ ಎಲ್ಲವು ನಿಯಂತ್ರಣಕ್ಕೆ ಬಂದಿದೆ. ಸೋರಿಕೆ‌ ತಪ್ಪಿಸಿದ್ದರಿಂದ ಆಕ್ಸಿಜನ್ ಕೊರತೆ ನಿವಾರಣೆ ಆಗಿದೆ. ಈಗಲೂ 37kl ಅಷ್ಟೇ ಆಕ್ಸಿಜನ್ ಬರ್ತಿದೆ. ಚಾಮರಾಜನಗರ ಘಟನೆ ನಂತರ ಸಮಸ್ಯೆಯನ್ನ ಆಲಿಸಲು‌ ಖುದ್ದು ನಾವೇ ಫಿಲ್ಡ್‌ಗೆ ಇಳಿದ್ದೇವು. ಅದಕ್ಕಾಗಿ ಸಮಸ್ಯೆಯನ್ನ ಅರಿತು ಕೆಲಸ ಮಾಡಿ ಎಲ್ಲವನ್ನು ತಹಬದಿಗೆ ತಂದಿದ್ದೇವೆ.

ಕೆಲಸ ಮಾಡಿದರೆ ಜನ ನೆನಪಿಸಿಕೊಳ್ತಾರೆ. ಇಲ್ಲವಾದ್ರೆ ಥೂ ಚಿ ಅಂತಾರೆ. ನಮ್ಮಲ್ಲಿ ಶಿಖಾ, ಅಭಿರಾಮ್, ರಂದೀಪ್‌‌ರಂತಹ ಮೆಲ್ಪಂಕ್ತಿ ಅಧಿಕಾರಿಗಳು ಇಲ್ಲಿ ಕೆಲಸ ಮಾಡಿದ್ದಾರೆ. ಶಿಖಾ ಅವರ ಜೊತೆ ದಸರಾ ಮಾಡಿದ್ವಿ. ರಂದೀಪ್ ಅವರ ಜೊತೆ ಯೋಗ ಡೇ ಮಾಡಿದ್ವಿ. ಅಭಿರಾಮ್ ಜೊತೆ ಕೊರೊನಾ ನಿಯಂತ್ರಣ ಮಾಡಿದ್ವಿ. ಈಗಲೂ ಯಾರೇ ಅಧಿಕಾರಿ ಇದ್ದರೂ ಅವರ ಜೊತೆ ಕೆಲಸ ಮಾಡ್ತಿವಿ. ಅವರು ಬಂದರೂ ಸರಿ ಬರದೆ ಇದ್ದರೂ ಸರಿ ನಾವು ಕೆಲಸ ಮಾಡ್ತಿವಿ. ಟಾಸ್ಕ್‌ಪೋರ್ಸ್ ಸಮತಿ ರಚನೆ ನಂತರ ಸಮಸ್ಯೆಗಳು ಬಗೆಹರಿದಿವೆ ಎಂದು ಮೈಸೂರಿನಲ್ಲಿ ಪ್ರತಾಪ್‌ಸಿಂಹ ಹೇಳಿಕೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *