ಜಿಲ್ಲಾ ಪ್ರವಾಸ ಕೈಗೊಂಡ ನೂತನ ಎಸ್ಪಿ ಆರ್. ಚೇತನ್

1 min read

ಮೈಸೂರು: ಅಧಿಕಾರ ವಹಿಸಿಕೊಂಡ ಎರಡೇ ದಿನಕ್ಕೆ ಪ್ರಮುಖ ಕಡೆಗಳಲ್ಲಿ ನೂತನ ಎಸ್ಪಿ ಆರ್ ಚೇತನ್ ಅವರು ಜಿಲ್ಲಾ ಪ್ರವಾಸ ಕೈಗೊಂಡಿಂದಾರೆ.

ಈ ವೇಳೆ ಲಾಕ್ ಡೌನ್, ಕೊರೊನ ನಿಯಂತ್ರಣ ಸೇರಿದಂತೆ ಹಲವು ಪ್ರಕರಣಗಳ ಬಗ್ಗೆ ಪರಿಶೀಲಿಸಿದರು. ಹೆಚ್.ಡಿ.ಕೋಟೆ ಪೊಲೀಸ್ ಠಾಣೆಗೆ ಭೇಟಿ‌ ನೀಡಿ ಅಧಿಕಾರಿಗಳ ಸಭೆ ನಡೆಸಿ, ಇದೆ ವೇಳೆ ಕರ್ತವ್ಯ ಪರಿಶೀಲನೆ ನಡೆಸಿದರು.

ಹಿರೇಹಳ್ಳಿಯಲ್ಲಿ ನಡೆದಿದ್ದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಮಗು ಮಾರಾಟ ಮತ್ತು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟೈಗರ್ ಬ್ಲಾಕ್ ಗೆ ಭೇಟಿ ನೀಡಿದರು. ಅಲ್ಲದೆ ಹೆಚ್.ಡಿ ಕೋಟೆ ಸರಗೂರು ವ್ಯಾಪ್ತಿಯ ಚೆಕ್ ಪೋಸ್ಟ್ ಸೇರಿದಂತೆ ಹಲವು ವಿಚಾರಗಳ ಪರಿಶೀಲನೆ ನಡೆಸಿದರು.

About Author

Leave a Reply

Your email address will not be published. Required fields are marked *