ಕೊರೊನಾ ಅಬ್ಬರಕ್ಕೆ ಮೈಸೂರಿನ ಹಣ್ಣಿನ ವ್ಯಾಪಾರಿಗಳು ಕಂಗಾಲು

1 min read

ಮೈಸೂರು: ಕೊರೊನಾ ಅಬ್ಬರಕ್ಕೆ ಮೈಸೂರಿನ ಹಣ್ಣಿನ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಕಲ್ಲಂಗಡಿ, ಕರ್ಬೂಜ, ದ್ರಾಕ್ಷಿ, ಸೇಬು, ಆಲ್ಫೋನ್ಸಾ, ಬಿನಿಸಾ, ಜವಾರಿ ಮಾವು ಕೇಳೋರೆ ಇಲ್ಲ.

ಕೊರೊನಾದಿಂದ ಒಂದೆಡೆ ಮಾವು ಬೆಳೆಗಾರರಿಗೆ ಸಂಕಷ್ಟ, ಮತ್ತೊಂದೆಡೆ ಮಾವು ವ್ಯಾಪಾರಸ್ಥರ ಗೋಳು ಹೇಳತೀರದು. ಕೊರೊನಾದಿಂದ  ಖರೀದಿಸುವವರ ಸಂಖ್ಯೆ ಇಳಿಮುಖಗೊಂಡಿದೆ. ವ್ಯಾಪಾರವಾಗದೇ ಹಣ್ಣುಗಳು ಮಾರುಕಟ್ಟೆಯಲ್ಲೇ ಉಳಿಯುತ್ತಿವೆ‌.

ಮೈಸೂರಿನ ಹಳೇ ಆರ್ಎಂಸಿಯ ಹಣ್ಣಿನ ಮಾರುಕಟ್ಟೆಯಲ್ಲಿ ಕೊಳ್ಳಲು ಜನರೇ ಇಲ್ಲ. ಹಣ್ಣುಗಳನ್ನ ಕೇಳೋರಿಲ್ಲ. ಇನ್ನು ಹೊರ ರಾಜ್ಯಗಳ ಸಾಗಣೆಗೆ ಬೇಡಿಕೆ ಕುಸಿತಗೊಂಡಿದೆ. ಗ್ರಾಹಕರಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರಕುತ್ತಿಲ್ಲ, ಮಾವು ಸಿಜನ್ ಆದರೂ ವ್ಯಾಪಾರವಿಲ್ಲ. ಬಂಡವಾಳ ಹಾಕಿ ವ್ಯಾಪಾರವಿಲ್ಲದೇ ನಷ್ಟ ಅನುಭವಿಸುತ್ತಿದ್ದೇವೆ. ಕರ್ಫ್ಯೂ ನಡುವೆ ವ್ಯಾಪಾರ ವಹಿವಾಟಿಗೆ ಕೊಟ್ಟಿರುವ ಸಮಯ ಸಾಲುತ್ತಿಲ್ಲ. ಇದ್ರಿಂದ ರೈತರಿಗಷ್ಟೇ ಅಲ್ಲ ಹಣ್ಣಿನ ವ್ಯಾಪಾರಿಗಳಿಗೆ ಬಹಳ ನಷ್ಟವಾಗಿದೆ. ವ್ಯಾಪಾರವಿಲ್ಲದೇ ಹಣ್ಣಗಳೆಲ್ಲಾ ಹಾಳಾಗುತ್ತದೆ, ಕಸಕ್ಕೆ ಸುರಿಯಬೇಕಾದ ಪರಿಸ್ಥಿತಿ ಬಂದಿದೆ. ಯಾರಿಗೇಳೋಣ ನಮ್ಮ ಕಷ್ಟ ಎಂದು ಹಣ್ಣಿನ ವ್ಯಾಪಾರಿಗಳ ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *