ಶಸ್ತ್ರ ಚಿಕಿತ್ಸೆಗೆ 3ಲಕ್ಷ ಪರಿಹಾರ ಕೊಡಿಸಿದ ಸಂಸದೆ ಸುಮಲತಾ!

1 min read

ಮಂಡ್ಯ : ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಯುವಕನಿಗೆ ಸಂಸದೆ ಸುಮಲತಾ ಅಂಬರೀಶ್ ಅವರು ಸಹಾಯ ಮಾಡಿದ್ದಾರೆ. ನಂಬಿನಾಯಕನಹಳ್ಳಿಯ 16 ವರ್ಷದ ದರ್ಶನ್.ಎನ್.ಸಿ ಎಂಬ ಯುವಕ ‘ಕಾಕ್ಲಿಯರ್ ಇಂಪ್ಲಾಂಟ್’ ಎಂಬ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು.

ಈ ವೇಳೆ ಆಪರೇಷನ್ ವೆಚ್ಚಕ್ಕಾಗಿ ಸಂಸದೆ ಸುಮಲತಾರ ಕಚೇರಿಯನ್ನ ಪೋಷಕರು ಸಂಪರ್ಕಿಸಿದ್ದಾರೆ. ಈ ವೇಳೆ ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಂಸದೆ ಸುಮಲತಾ ಅಂಬರೀಶ್ ಅವರು, ‘ಪ್ರಧಾನ ಮಂತ್ರಿಗಳ PMNRF ನಿಧಿಯಿಂದ ರೂ. 3 ಲಕ್ಷ ಪರಿಹಾರವನ್ನ ತ್ವರಿತವಾಗಿ ಒದಗಿಸಿಕೊಟ್ಟಿದ್ದಾರೆ.

ಅಲ್ಲದೆ ತ್ವರಿತವಾಗಿ ಈ ಯೋಜನೆ ಫಲದ್ರಾಯಕವಾದ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

About Author

Leave a Reply

Your email address will not be published. Required fields are marked *