ನಂಜನಗೂಡು ದೇಗುಲ ತೆರವು ವಿಚಾರ ತಹಸೀಲ್ದಾರ್ ಎತ್ತಂಗಡಿ ಮಾಡಿದ ಸರ್ಕಾರ!

1 min read

ಮೈಸೂರು – ನಂಜನಗೂಡು : ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ಮಾಡಿದ ಪ್ರಕರಣದಲ್ಲಿ ಕೊನೆಗು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದಂಡಾಧಿಕಾರಿ ಮೋಹನ್ ಕುಮಾರಿ ಅವರನ್ನ ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ನಂಜನಗೂಡು ತಹಸೀಲ್ದಾರ್ ವರ್ಗಾವಣೆ ಮಾಡಿ ಐಎಂಎ ವಂಚನೆ ಪ್ರಕರಣ ಹಾಗೂ ಸಕ್ಷಮ ಪ್ರಾಧಿಕಾರಕ್ಕೆ ನೇಮಕ ಮಾಡಿದೆ.

ವರ್ಗಾವಣೆ ಪತ್ರ

ಅಲ್ಲದೆ ನಂಜನಗೂಡಿಗೆ ಪ್ರಭಾರ ತಹಸೀಲ್ದಾರ್ ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ‌ ಕೊಟ್ಟಿದ್ದು, ಕೊನೆಗು ನಿಷ್ಠಾವಂತ ಅಧಿಕಾರಿಯನ್ನ ಸರ್ಕಾರ ವರ್ಗಾವಣೆ ಮಾಡಿದೆ. ಈ‌ ಮೂಲಕ ತಾನು ಮಾಡಿದ ಆದೇಶವನ್ನ ಪಾಲಿಸಿದ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ಭಾಗ್ಯ ಕೊಟ್ಟ ಕೀರ್ತಿಗೆ ಸರ್ಕಾರ ಭಾಜನವಾಗಿದೆ.

About Author

Leave a Reply

Your email address will not be published. Required fields are marked *