ಲಾಕ್ ಡೌನ್’ನಿಂದಾಗಿ ಆರ್ಥಿಕ ಸಂಕಷ್ಟ: ಕಿರುನಾಟಕ ನಿರ್ದೇಶಕ ಆತ್ಮಹತ್ಯೆ
1 min read
ಮೈಸೂರು: ಲಾಕ್ ಡೌನ್ ಹಿನ್ನಲೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಿರುನಾಟಕ ಕಲಾವಿದರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನವೀನ್ ಕುಮಾರ್(32) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕಿರುನಾಟಕ ಕಲಾವಿದ.
ಮೈಸೂರಿನ ವಿಜಯನಗರದಲ್ಲಿ ಘಟನೆ ನಡೆದಿದೆ. ತನ್ನದೇ ತಂಡ ರಚಿಸಿಕೊಂಡು, ನಾಟಕಗಳನ್ನ ಡೈರೆಕ್ಟ್ ಮಾಡಿ ಮೈಸೂರು ಹಾಗೂ ಬೆಂಗಳೂರಿನ ಕಲಾಮಂದಿರದಲ್ಲಿ ನವೀನ್ ಪ್ರದರ್ಶನ ನೀಡುತ್ತಿದ್ದರು. ಆದರೆ ನವೀನ್ಗೆ ಲಾಕ್ ಡೌನ್ ವೇಳೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಹಿನ್ನಲೆ ಮನನೊಂದ ನವೀನ್ ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
