ಶಾಸಕ ಎಸ್.ಎ.ರಾಮದಾಸ್ ಅವರಿಂದ ಕಾಶಿ ವಿಶ್ವನಾಥ ದೇಗುಲ ಲೈವ್ ವೀಕ್ಷಣೆ

1 min read

ಮೈಸೂರು: ಇಂದು ಬೆಳಗ್ಗೆ ಶ್ರೀರಾಂಪುರ 2ನೆ ಹಂತದಲ್ಲಿರುವ ಶಿವ ದೇವಾಲಯದಲ್ಲಿ ಶಾಸಕ ಎಸ್.ಎ.ರಾಮದಾಸ್ ಅವರು ಭಕ್ತರೊಂದಿಗೆ ಶಿವ ದೇವಾಲಯದಲ್ಲಿ ಕಾಶೀ ವಿಶ್ವನಾಥ ಕಾರಿಡಾರ್ ನ ಲೈವ್ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಪ್ರಧಾನಿ ನರೇಂದ್ರ ಮೋದಿಯವರು 2019 ರಲ್ಲಿ ಕಾಶಿಯಲ್ಲಿ ಗೆದ್ದ ನಂತರ ಕಾಶಿಯನ್ನು ಅಭೂತಪೂರ್ವವಾಗಿ ಅಭಿವೃದ್ಧಿ ಮಾಡಿದ್ದಾರೆ. ಕಾಶೀ ಹಿಂದೂಗಳ ಅತ್ಯಂತ ಪವಿತ್ರ ಸ್ಥಳವಾಗಿದೆ, ಪ್ರತೀ ಹಿಂದುವೂ ಸಹ ಸಾಯುವುದರ ಒಳಗೆ ಕಾಶಿ ಗೆ ಹೋಗಬಬೇಕು ಎಂಬ ಬಯಕೆಯನ್ನು ಇಟ್ಟುಕೊಂಡಿರುತ್ತಾನೆ. ಕಾಶಿಯನ್ನು ದೇವ ಭೂಮಿ ಎಂದು ಕರೆಯಲಾಗುತ್ತದೆ. ದ್ವಾದಶ ಜ್ಯೋತಿರ್ಲಿಂಗ ಗಳಲ್ಲಿ ಕಾಶಿ ಮೊದಲನೆಯದಾಗಿದೆ. ಬರೀ ಕಾಶಿ ಅಷ್ಟೇ ಅಲ್ಲ ಕೇದಾರ್ ನಾಥ, ಸೋಮನಾಥ , ಅಯೋಧ್ಯೆಯ ಯಂತಹ ಪುಣ್ಯ ಸ್ಥಳಗಳ ಅಭಿವೃದ್ಧಿಯನ್ನು ಮೋದಿಜಿ ಸರ್ಕಾರ ಮಾಡುತ್ತಿದೆ. ಇಂತಹ ಒಂದು ಸು ಸಂದರ್ಭವನ್ನು ಕಣ್ತುಂಬಿಕೊಳ್ಳುತ್ತಿರುವ ನಾವೇ ಪುಣ್ಯವಂತರು. ಈ ಸಮಯದಲ್ಲಿ ಒಂದು ನಿರ್ಧಾರ ಮಾಡಿದ್ದೇವೆ ಯಾರಿಗೆ ಕಾಶಿ ದರ್ಶನ ಮಾಡಬೇಕೆಂಬ ಬಯಕೆ ಇರುತ್ತದೆಯೋ ಅವರನ್ನು ಮುಂದಿನ ದಿನಗಳಲ್ಲಿ ಒಟ್ಟಾಗಿ ವಿಶ್ವನಾಥನ ದರ್ಶನ ಮಾಡಿಸುವ ವ್ಯವಸ್ಥೆಯನ್ನು ಮಾಡುವವರಿದ್ದೇವೆ ಎಂದರು.

ಅಲ್ಲದೇ ವಿಶೇಷವಾಗಿ ಶಿವ ದೇವಾಲಯಕ್ಕೆ 10 ಲಕ್ಷರೂ ಗಳನ್ನು ನೀಡುವುದಾಗಿ ಮಾನ್ಯ ಶಾಸಕರು ಹೇಳಿದರು, 5 ಲಕ್ಷ ಮಹಾನಗರ ಪಾಲಿಕೆಯಿಂದ ಹಾಗೂ 5 ಲಕ್ಷ ಭಕ್ತಾದಿಗಳಿಗೆ ವಿನಿಯೋಗವಾಗಲಿ ಎಂದು ವೈಯಕ್ತಿಕವಾಗಿ ನೀಡುವುದಾಗಿ ತಿಳಿಸಿದರು.

ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರುಗಳಾದ ಬಿ.ವಿ.ಮಂಜುನಾಥ್, ಶ್ರೀಮತಿ ಚಂಪಕ, ಶ್ರೀಮತಿ ಗೀತಾಶ್ರೀ ಯೋಗಾನಂದ್, ಕೆ.ಆರ್ ಕ್ಷೇತ್ರದ ಭಾಜಪಾ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್, ಕ್ಷೇತ್ರದ ಬಿ.ಎಲ್.ಎ 1 ಆದ ಪ್ರಸಾದ್ ಬಾಬು,ಕಾರ್ಯದರ್ಶಿ ಗಿರೀಶ್, ಶಿವ ದೇವಸ್ಥಾನದ ಅಧ್ಯಕ್ಷರಾದ ಪರಮಶಿವಪ್ಪ, ಉಪಾಧ್ಯಕ್ಷರಾದ ಮಹಾದೇವಪ್ಪ, ಖಜಾಂಜಿ ಸುರೇಶ್ ವಾಲಿ, ಕಾರ್ಯದರ್ಶಿ ಬಸವಣ್ಣ, ನಿರ್ದೇಶಕರಾದ ಪ್ರಕಾಶ್, ಶ್ರೀಕಂಠ ಮೂರ್ತಿ, ಉಮಾಕಾಂತ್, ಇನ್ನಿತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *