ಡಾ.ಮಂಜುನಾಥ್ ಅವರನ್ನೇ ಮುಂದುವರೆಸಿ!

1 min read

ಜು.19ರಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್ ಮಂಜುನಾಥ್ ಅವರ ಅಧಿಕಾರಾವಧಿ ಮುಕ್ತಾಯವಾಗುತ್ತಿದ್ದು, ಮತ್ತೇ ಒಂದು ವರ್ಷ ಅವರನ್ನೇ ಮುಂದುವರೆಸಬೇಕೆಂದು ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ. ಈಗಾಗಲೇ ಅವರ ಜಾಗಕ್ಕೆ ಹೊಸ ನಿರ್ದೇಶಕರನ್ನ ನೇಮಕ ಮಾಡಲು ಸರ್ಕಾರ ಮುಂದಾಗಿದ್ದು, ಸಾರ್ವಜನಿಕರ ಒತ್ತಾಯದ ಹಿನ್ನಲೆಯಲ್ಲಿ ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಅವರ ಅಭಿಮಾನಿಗಳು ಹಾಗೂ ಸಾಕಷ್ಟು ಜನರು, ಗುಣಮುಖರಾದವರು ಡಾ.ಮಂಜುನಾಥ್ ಅವರ ಪರವಾಗಿದ್ದು ಸರ್ಕಾರದಲ್ಲಿ ಮಾತ್ರ ಈ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಆದರೆ ಈಗಾಗಲೇ ಅವರನ್ನೇ ಮುಂದುವರೆಸಬೇಕೆಂದು ಸಾಕಷ್ಟು ಒತ್ತಾಯ ಕೇಳಿ‌ ಬಂದಿದೆ.

ರೋಗಿಗಳ ಪಾಲಿಗೆ ಕಣ್ಣಿಗೆ ಕಾಣುವ ವೈದ್ಯ ದೇವರೇ ಆದ ಕೋಟ್ಯಾಂತರ ಹೃದಯ ಮಿಡಿತವನ್ನು ಗೆದ್ದಿರುವ ಡಾಕ್ಟರ್ ಮಂಜುನಾಥ್ ಸರ್ ರವರಿಗೆ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಡೈರೆಕ್ಟರ್ ಆಗಿ ಸೇವೆ ಮಾಡಲು ಹಾಗೂ ಬಡ ಜನತೆಗೆ ನೆರವಾಗಲು ಇವರ ಸೇವೆ ಬಹಳ ಅಗತ್ಯವಿದೆ. ಆತ್ಮೀಯ ಬಂಧುಗಳೇ ಇವರು ಇನ್ನೂ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಕಾಯಕಯೋಗಿಯಾಗಿ ಮುಂದರಿಯಬೇಕೆಂದು ನನ್ನ ಆಸೆ ಹಾಗೂ ತಾಯಿ ಚಾಮುಂಡೇಶ್ವರಿಯಲ್ಲಿ ನಾನು ಪ್ರಾರ್ಥಿಸಿಕೊಳ್ಳುತ್ತೇನೆ.

ಮಹೇಂದ್ರ.ಎಂ. ಅಭಿಮಾನಿ..

About Author

Leave a Reply

Your email address will not be published. Required fields are marked *