ಮೈಸೂರಿನಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ!

1 min read

ಮೈಸೂರಿನಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿ ವೇಳೆ ಐಪಿಎಲ್ ಛೇರ್ಮನ್ ಬ್ರಿಜೇಶ್ ಪಟೇಲ್ ಮತ್ತು ಕೆ.ಎಸ್. ಸಿ.ಎ. ಸೆಕ್ರೆಟರಿ ಸಂತೋಷ್ ಮೆನನ್ ಅವರನ್ನು ಸಂಸದ ಪ್ರತಾಪ್ ಸಿಂಹ ಭೇಟಿಯಾಗಿದ್ದಾರೆ. ಇದೇವೇಳೆ ಉಭಯತ್ರಯರು ಮಾತುಕತೆ ನಡೆಸುವ ವೇಳೆ ಮೈಸೂರಿನಲ್ಲಿ ಒಂದು ವಿಶ್ವದರ್ಜೆಯ ಕ್ರಿಕೆಟ್ ಸ್ಟೇಡಿಯಂ ಸ್ಥಾಪನೆಗೆ ಕಡಿಮೆ ದರದಲ್ಲಿ ಸಾತಗಳ್ಳಿ ಬಳಿಯ ಮುಡಾ ಜಾಗ ಅಥವಾ ಬೇರೆ ಕಡೆ ಕನಿಷ್ಠ 20 ಎಕರೆ ಜಾಗವನ್ನು ಕೊಡಿಸುವಂತೆ ಕ್ರಿಕೆಟ್ ಮಂಡಳಿಯವರು ಕೇಳಿದ್ದಾರೆ. ಸಂಸದರಾದ ಪ್ರತಾಪ್ ಸಿಂಹ ಅವರು ಆದಷ್ಟು ಶೀಘ್ರವಾಗಿ ಜಾಗ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *