ಮೈಸೂರಿನ ಗಡಿ ಭಾಗ ಬಾವಲಿ ಚೆಕ್ ಪೋಸ್ಟ್‌ಗೆ ಐಜಿ ಭೇಟಿ ಪರಿಶೀಲನೆ!

1 min read

ಮೈಸೂರು – HD ಕೋಟೆ / ಕೇರಳದಲ್ಲಿ ಕರೋನಾ ಹೆಚ್ಚಳ ಹಿನ್ನಲೆಯಲ್ಲಿ ಗಡಿ ಭಾಗ ಬಾವಲಿಗೆ ಐಜಿ ಪ್ರವೀಣ್ ಪವಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ಜಿಲ್ಲೆಯ ಎಚ್ ಡಿ ಕೋಟೆಯಲ್ಲಿರುವ ಗಡಿ ಭಾಗಕ್ಕೆ ಭೇಟಿ ಕೊಟ್ಟು ನದಿ ಹಾಗೂ ಕಾಡಿನ ಮೂಲಕ ಜನರು ರಾಜ್ಯಕ್ಕೆ ಬರುವ ಆತಂಕ ಇರುವ ಕಾರಣ, ತಾಲೂಕು ಆಡಳಿತದಿಂದ ದೋಣಿ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಈ ಹಿನ್ನಲೆಯಲ್ಲಿ ನದಿ ಹಾಗೂ ಕಾಡಿನ ರಸ್ತೆಗಳನ್ನ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದಕ್ಷಿಣ ವಲಯ ಐಜಿ ಪ್ರವೀಣ್ ಪವಾರ್‌ ಅವರಿಗೆ ಎಸ್‌ಪಿ ಚೇತನ್, ಡಿವೈಎಸ್ಪಿ, THO ರವಿ, ನೋಡಲ್ ಅಧಿಕಾರಿ ಸಾಥ್ ನೀಡಿದ್ದರು. ಈ ವೇಳೆ ಸಿಪಿಐ ಆನಂದ್, ಎಸ್‌ಐ ಜಯಪ್ರಕಾಶ್, ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಐಜಿ ಅವರು ಮಾಹಿತಿ ಪಡೆದರು. ಈ ವೇಳೆ ದೋಣಿ ಸಂಚಾರ ನಿಷೇಧ, ಕಾಡಿನ ರಸ್ತೆಯ ಸಂಚಾರ ನಿಷೇಧ ಮಾಡಿರುವ ಬಗ್ಗೆಯು ಮಾಹಿತಿ ಪಡೆದುಕೊಂಡರು. ಅಲ್ಲದೆ ಅನಗತ್ಯವಾಗಿ ಓಡಾಡಿದ್ರೆ ಅಂತವರ ಕ್ರಮಕ್ಕೆ ಐಜಿ ಪ್ರವೀಣ್ ಅವರು ಸೂಚಿಸಿದರು. ಈಗಾಗಲೇ ಸಾಕಷ್ಟು ಅಲರ್ಟ್ ಆಗಿರುವ ಪೊಲೀಸ್ ಇಲಾಖೆ ಮತ್ತಷ್ಟು ಭದ್ರತೆ ಕೈಗೊಂಡಿದೆ.

About Author

Leave a Reply

Your email address will not be published. Required fields are marked *