ಮೈಸೂರಿನಲ್ಲಿ ಸೋಮವಾರದಿಂದ KSRTC ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್!

1 min read

ಮೈಸೂರಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗಗಳಿಂದ ಸೋಮವಾರದಿಂದಲೇ ಸಾರಿಗೆ ವ್ಯವಸ್ಥೆ ಶುರುವಾಗಲಿದೆ ಎಂದು ಮೈಸೂರಿನ ವಿಭಾಗೀಯ ನಿಯಂತ್ರಣ ಅಧಿಕಾರಿ ಮಾಹಿತಿ‌ ನೀಡಿದ್ದಾರೆ.

KSRTC ಯಿಂದ ಅಧಿಕೃತ ಪ್ರಕಟಣೆ!

ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಹೊರಡಿಸಿರೋ ಅಧಿಕಾರಿಗಳು ಸೋಮವಾರ ಬೆಳಗ್ಗೆ 6 ಗಂಟೆಯಿಂದ ಕಾರ್ಯಾರಂಭ ಮಾಡಲು ಸೂಚಿಸಿದೆ. ಅದರಂತೆ ನಗರ ಮತ್ತು ಗ್ರಾಮಾಂತರ ವಿಭಾಗಗಳಿಂದ ಬಸ್ ಸಂಚಾರ ಶುರುವಾಗಲಿದೆ. ಅಲ್ಲದೆ ಮೂರನೇ ಕ್ಯಾಟಗರಿ ಇಂದ 2ನೇ ಕ್ಯಾಟಗರಿಗೆ ಮೈಸೂರು ಬಂದ ಹಿನ್ನಲೆಯಲ್ಲಿ ಈ‌ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಸೂಚನೆ ಏನು?

  1. ಕಡ್ಡಾಯವಾಗಿ ಸಾರಿಗೆ ಚಾಲಕರು ನೆಗಿಟಿವ್ ವರದಿ ತರಬೇಕು.
  2. ವಾಕ್ಸಿನ್ ಪ್ರತಿಯೊಬ್ಬ ಸಿಬ್ಬಂದಿ ಹಾಕಿಸಲಾಗಿದ್ದು ಆತಂಕ ಬೇಡ.
  3. ಪ್ರತಿಯೊಬ್ಬ ಸಿಬ್ಬಂದಿ ಕರ್ತವ್ಯದ ವೇಳೆ ಮಾಸ್ಕ್ ಧರಿಸಬೇಕು.
  4. ಬಸ್ ಒಂದು ರೂಟ್ ಮುಗಿಸಿದ ಬಳಿಕ ಸ್ಯಾನಿಟೈಸ್ ಆಗಬೇಕು.
  5. ಸರ್ಕಾರದ ಸೂಚನೆಯಂತೆ ಶೇ. 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ.
S.P.ನಾಗರಾಜು, ವಿಭಾಗೀಯ ನಿಯಂತ್ರಣಾಧಿಕಾರಿಗಳು,
ಕೆ.ಎಸ್.ಆರ್.ಟಿ.ಸಿ. ಮೈಸೂರು ನಗರ

ಈ‌ ಮೇಲ್ಕಂಡ ಸೂಚನೆ ಜೊತೆಗೆ ಪ್ರಯಾಣಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಭಾಗೀಯ ನಿಯಂತ್ರಣ ಅಧಿಕಾರಿಗಳು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *