ಪ್ರಾಣಿಗಳನ್ನ ದತ್ತು ಪಡೆದ ಅಭಿಮಾನಿಗಳಿಗೆ ಖುದ್ದು ಡಿ ಬಾಸ್ ದರ್ಶನ್ರಿಂದಲೇ ಪ್ರಮಾಣ ಪತ್ರ ವಿತರಣೆ.
1 min read![](https://nannurumysuru.com/wp-content/uploads/2021/08/IMG_20210824_123434-1024x683-1.jpg)
ಮೈಸೂರು- ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಟ್ಟ ಆ ಒಂದು ಕರೆಯ ಮೇರೆಗೆ ಕೋಟಿ ಕೋಟಿ ಆದಾಯ ರಾಜ್ಯದ ಮೃಗಾಲಯಕ್ಕೆ ಹರಿದು ಬಂದಿತ್ತು. ಈ ವೇಳೆ ಹಲವರು ಪ್ರಾಣಿಗಳನ್ನು ದತ್ತು ಸ್ವೀಕಾರ ಮಾಡಿದ್ದರು. ಮಾತ್ರವಲ್ಲ ಇವರಿಗೆಲ್ಲ ನಟ ದರ್ಶನ ಅವರೇ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ಅರ್ಪಿಸಿದ್ದರು.
ಈ ಸಾಲಿನಲ್ಲಿ ದರ್ಶನ್ ಅವರ ಅಭಿಮಾನಿಗಳು ಸಹ ದೊಡ್ಡ ಮಟ್ಟದಲ್ಲಿ ಪ್ರಾಣಿಗಳನ್ನ ದತ್ತು ಸ್ವೀಕಾರ ಮಾಡಿದ್ದರು. ಅವರಿಗಾಗಿ ಇಂದು ಮೈಸೂರು ಮೃಗಾಲಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಖುದ್ದು ಅವರಿಗೆಲ್ಲ ಡಿ ಬಾಸ್ ದರ್ಶನ್ ಅವರೇ ಪ್ರಮಾಣ ಪತ್ರ ವಿತರಿಸಿದ್ದಾರೆ.
![](https://nannurumysuru.com/wp-content/uploads/2023/09/Nayana-Kumars.jpg)
ಹೌದು, ಮೃಗಾಲಯದಲ್ಲಿ ದರ್ಶನ್ ಅಭಿಮಾನಿಗಳಿಂದ ದತ್ತು ಸ್ವೀಕಾರ ಮಾಡಿದ ಕಾರಣ ಪ್ರಾಣಿ ದತ್ತು ಸ್ವೀಕರಿಸಿದ ದರ್ಶನ್ ಅಭಿಮಾನಿಗಳಿಗೆ ಇಂದು ಪ್ರಮಾಣಪತ್ರ ವಿತರಿಸಲಾಯಿತು. ಖುದ್ದು ಮೃಗಾಲಯಕ್ಕೆ ಆಗಮಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮಾಣಪತ್ರ ವಿತರಿಸಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.