ಯದುವೀರ್ ಒಡೆಯರ್​ಗೆ BJP ಟಿಕೆಟ್ ಹಿನ್ನೆಲೆ: ಬಿಜೆಪಿ ಒಕ್ಕಲಿಗ ಮುಖಂಡನಿಗೆ ಕಾಂಗ್ರೆಸ್ ಗಾಳ

1 min read

ಮೈಸೂರು: ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ ಹಿನ್ನೆಲೆ ಕಾಂಗ್ರೆಸ್ ನಲ್ಲಿ ತಂತ್ರಗಾರಿಕೆ ಬದಲಾಗಿದೆ. ಬಿಜೆಪಿ ಒಕ್ಕಲಿಗ ಮುಖಂಡನಿಗೆ ಕಾಂಗ್ರೆಸ್ ಗಾಳ ಹಾಕಿದೆ.

ಹೌದು. ಮಾಜಿ ಶಾಸಕ ವಾಸು ಪುತ್ರ ಕವೀಶ್ ಗೌಡನಿಗೆ ಕಾಂಗ್ರೆಸ್ ಗಾಳ ಹಾಕಿದೆ. ಮೈಸೂರು ಕೊಡಗು ಒಕ್ಕಲಿಗರು ಅತಿ ಹೆಚ್ಚು ಮತದಾರರನ್ನ ಹೊಂದಿರುವ ಕ್ಷೇತ್ರ. ಒಕ್ಕಲಿಗರು ಹಾಗೂ ಅಹಿಂದ ಮತಗಳನ್ನ ಒಗ್ಗೂಡಿಸಿ ಬಿಜೆಪಿ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲಾನ್ ಹಾಕಿದೆ.

ಈಗಾಗಲೇ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಯಿಂದ ಕವೀಶ್ ಗೌಡ ಸ್ಪರ್ಧೆ ಮಾಡಿದ್ದರು. ಕೆಲವು ದಿನಗಳ ಕಾಲ ಕ್ಷೇತ್ರ ಸಂಚಾರ ಮಾಡಿ 50 ಸಾವಿರಕ್ಕು ಹೆಚ್ಚು ಮತಗಳನ್ನ ಕವೀಶ್ ಗೌಡ ಪಡೆದಿದ್ದರು. ಇದೀಗ ಈ ಕಾರಣದಿಂದಾಗಿ ಕವೀಶ್ ಗೌಡ ಸೂಕ್ತ ಅಭ್ಯರ್ಥಿ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಹಿರಿಯ ಮುಖಂಡರು ಬಂದಿದ್ದಾರೆ. ಜೊತೆಗೆ ಕ್ಲೀನ್ ಇಮೇಜ್ ಹೊಂದಿರುವ ಕವೀಶ್.

ಚಾಮರಾಜ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸದಿಂದಲೇ ಸದ್ದು ಮಾಡಿದ್ದ ಕವೀಶ್ ತಂದೆ ಮಾಜಿ‌ ಶಾಸಕ ದಿ. ವಾಸು ಅವರು. ಅನುಕಂಪದ ಅಲೆ ವರ್ಕ್ ಔಟ್ ಮಾಡಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ.

About Author

Leave a Reply

Your email address will not be published. Required fields are marked *