ಕಿಚ್ಚ ಸುದೀಪ್ ನಿಂದಿಸಿದವರ ವಿರುದ್ಧ ದೂರು ದಾಖಲು!

1 min read

ಕಿಚ್ಚ ಸುದೀಪ್ ಹಾಗೂ ಕನ್ನಡ ಚಿತ್ರರಂಗದ ವಿರುದ್ಧ ಅಹೋರಾತ್ರ ಹಾಗೂ ಚರಣ್ ನಿಂದನೆ ಮಾಡಿದ ಹಿನ್ನಲೆಯಲ್ಲಿ ಫಿಲ್ಮ್ ಛೇಂಬರ್‌ನಿಂದ ಈ ಇಬ್ಬರ ವಿರುದ್ಧವು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಖುದ್ದು ಫಿಲ್ಮ್ ಛೇಂಬರ್‌ನ ಅಧ್ಯಕ್ಷರಿಂದಲೇ ದೂರು ದಾಖಲಾಗಿದ್ದು, ಯಾವುದೇ ಕ್ಷಣದಲಾದ್ರು ಇಬ್ಬರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ‌.

ಇನ್ನು ಚಲನಚಿತ್ರ ವಾಣಿಜ್ಯ ಮಂಡಲಿ ಕೊಟ್ಟಿರುವ ದೂರಿನ ಸಾರಾಂಶ ಇಲ್ಲಿದೆ.

ಆಹೋರಾತ್ರ ಮತ್ತು ಚರಣ್ , ಇವರು ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತ ಕಲಾವಿದರಾದ ಶ್ರೀ ಸುದೀಪ್‌ರ ವಿರುದ್ಧ ಅವಹೇಳನಕಾರಿಯಾಗಿ ನಿಂದಿಸಿರುವ ಬಗ್ಗೆ.

ಭಾರತೀಯ ಚಲನಚಿತ್ರರಂಗದ ಹೆಸರಾಂತ ಕಲಾವಿದ ಕಿಚ್ಚ ಸುದೀಪ್ ಎಂದೇ ಪ್ರಖ್ಯಾತಿ ಪಡೆದಿರುವ ಸುದೀಪ್‌ ವಿರುದ್ಧ ಆಹೋರಾತ್ರ ಮತ್ತು ಚರಣ್ ಎಂಬುವರು ಸಾಮಾಜಿಕ ಜಾಲಕಾಣಗಳಲ್ಲಿ ಅವಾಚ್ಯ ಶಬ್ದಗಳಿಂದ ಅವಹೇಳನಕಾರಿಯಾಗಿ ಪದ ಬಳಕೆ ಮಾಡುವ ಮೂಲಕ ಕನ್ನಡ ಚಿತ್ರರಂಗ ಹಾಗೂ ಸುದೀಪ್‌ರ ಘನತೆ, ಗೌರವಕ್ಕೆ ಚ್ಯುತಿ ತರುವಂತಹ ಹೇಳಿಕೆ ನೀಡಿರುವುದು ಬೇಸರದ ಸಂಗತಿಯಾಗಿದೆ. ಇಂತಹ ಹೇಳಿಕೆಗಳಿಂದ ಕನ್ನಡ ಚಿತ್ರರಂಗ ಹಾಗೂ ಕಲಾವಿದರ ಬಗ್ಗೆ ಸಾರ್ವಜನಿಕರಲ್ಲಿ ಇಲ್ಲಸಲ್ಲದ ಗೊಂದಲಗಳಿಗೆ ಎಡೆಮಾಡಿ ಕೊಟ್ಟಂತಾಗುತ್ತದೆ. ಆದ್ದರಿಂದ ತಾವು ದಯಮಾಡಿ ಆಹೋರಾತ್ರ ಮತ್ತು ಚರಣ, ಇವರು ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್‌ರ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಯುಳ್ಳ ವಿಡಿಯೋಗಳನ್ನು ತೆಗೆದುಹಾಕಲು ವಿನಂತಿಸುತ್ತಾ, ಕಾನೂನು ಕ್ರಮ ಜರುಗಿಸಿ : ಚಿತ್ರರಂಗದ ಹಾಗೂ ಕಲಾವಿದರ ಬೆಳವಣಿಗೆಗೆ ಯಾವುದೇ ರೀತಿಯ ಚ್ಯುತಿ ಬರದಂತೆ ಸಹಕರಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇವೆ . ವಂದನೆಗಳೊಡನೆ.

ತಮ್ಮ ವಿಶ್ವಾಸಿ.

M.J. ( ಭಾ.ಮ ಹರೀಶ್ )

ಅಧ್ಯಕ್ಷರು ( ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ )

About Author

Leave a Reply

Your email address will not be published. Required fields are marked *