ರಾಜ್ಯ ಸರ್ಕಾರದಿಂದ 1250 ಕೋಟಿಯ Package ಘೋಷಣೆ
1 min read![](https://nannurumysuru.com/wp-content/uploads/2021/05/BSY.jpg)
ಬೆಂಗಳೂರು: ಕೊರೋನಾ ಸಂಕಷ್ಟಕಾಲದಲ್ಲಿ ಬಡ ಜನರ ಜೀವನಮಟ್ಟ ಸುಧಾರಣೆಯ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. 1, 250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಇದಾಗಿದೆ.
1. ಹೂವು ಹಣ್ಣು ತರಕಾರಿ ಬೆಳೆಗಾರರಿಗೆ 1ಹೆಕ್ಟೇರ್ ಗೆ ಹತ್ತು ಸಾವಿರ ರೂಪಾಯಿ
![](https://nannurumysuru.com/wp-content/uploads/2023/09/Nayana-Kumars.jpg)
2. ಆಟೋ ಟ್ಯಾಕ್ಸಿ ಮ್ಯಾಕ್ಸಿ ಕ್ಯಾಬ್ ಡ್ರೈವರ್ ಗಳಿಗೆ 3ಸಾವಿರ ರೂಪಾಯಿ
3. ಕಟ್ಟಡ ಕೂಲಿ ಕಾರ್ಮಿಕರಿಗೆ 3ಸಾವಿರ ರೂಪಾಯಿ
4. ಬೀದಿಬದಿ ವ್ಯಾಪಾರಿಗಳಿಗೆ 2ಸಾವಿರ ರೂಪಾಯಿಗಳು
5. ಕಲಾವಿದ ತಂಡಗಳಿಗೆ 3 ಸಾವಿರ ರೂಪಾಯಿ
6. ಅಸಂಘಟಿತ ಕಾರ್ಮಿಕರಿಗೆ (*ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಯಲ್ಲಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ) (ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ ಗಳು, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು ಕುಂಬಾರರು, ಕ್ಷೌರಿಕರು(ಸವಿತಾ ಸಮಾಜ) ಭಟ್ಟಿ ಕಾರ್ಮಿಕರು) 2ಸಾವಿರ ರೂಪಾಯಿಗಳು
7. ನಗರ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ 3 ಹೊತ್ತು ಊಟ
8. ಕರೋನಾ ರೋಗಿಗಳಿಗೆ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ
9. BPL ಪಡಿತರದಾರರಿಗೆ ಉಚಿತ 10kg ಅಕ್ಕಿ.
10. APL ಪಡಿತರದಾರರಿಗೆ 10kg ಅಕ್ಕಿ Rs.15/- ಒಂದು kg ರಂತೆ.
11. ಸಹಕಾರ ಸಂಘಗಳಲ್ಲಿ ಸಾಲ ಮರುಪಾವತಿಯನ್ನು (EMI) 01.05.21 ರಿಂದ 31.07.21ರವರೆಗೆ ಮುಂದೂಡಿಕೆ…