ಇಂದು ಕಬಿನಿ ಕೆ.ಆರ್.ಎಸ್ ಡ್ಯಾಂಗೆ ಸಿಎಂ ಬೊಮ್ಮಾಯಿಯಿಂದ ಬಾಗಿನಿ ಅರ್ಪಣೆ

1 min read

ಇಂದು ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆಯ ಕಬಿನಿ ಡ್ಯಾಂಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಾಗಿನ ಅರ್ಪಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ‌ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆಯ ಬೀಚನಹಳ್ಳಿಯಲ್ಲಿರು ಡ್ಯಾಂಗೆ ಬಾಗಿನ ಅರ್ಪಿಸಲಿದ್ದು ಇದಕ್ಕಾಗಿ ಸಕಲ ಸಿದ್ದತೆ ಆಗಿದೆ. ಈಗಾಗಲೇ 84 ಅಡಿ ಭರ್ತಿಯಾಗಿರೋ ಜಲಾಶಯ ರಾಜ್ಯದಲ್ಲೇ ಮೊದಲು ಭರ್ತಿಯಾಗೋ ಜಲಾಶಯ ಎಂಬ ಕೀರ್ತಿಗು ಭಾಜನವಾಗಿದೆ. ಈ ಹಿನ್ನಲೆಯಲ್ಲಿ ಡ್ಯಾಂ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇತ್ತ ಕಬಿನಿಗೆ ಬದಿನ ಅರ್ಪಿಸಿದ ಬಳಿಕ ಮಂಡ್ಯದ ಕೆ.ಆರ್.ಎಸ್ ಡ್ಯಾಂಗು ಸಿಎಂ ಬಾಗಿನ ಅರ್ಪಿಸಲಿದ್ದಾರೆ. ಈಗಾಗಲೇ 124 ಅಡಿ ತಲುಪಿರೋ ಕೆ.ಆರ್.ಎಸ್ ಡ್ಯಾಂಗೆ ಸಿಎಂ ಹಾಗೂ ಸಚಿವರು ಬೆಳಗ್ಗೆ 11.30ಕ್ಕೆ ಬಾಗಿನ ಅರ್ಪಿಸಲಿದ್ದಾರೆ.

About Author

Leave a Reply

Your email address will not be published. Required fields are marked *