ಚಾಮುಂಡಿ ಬೆಟ್ಟಕ್ಕೆ ರೋಪ್ ವೇ.! ಪ್ರವಾಸೋದ್ಯಮ ಇಲಾಖೆಯಿಂದ ಸಿದ್ದತೆ!!
1 min read![](https://nannurumysuru.com/wp-content/uploads/2021/07/Chamundi-Hills.jpeg)
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಯಾರೇ ವಿರೋಧ ಮಾಡಿದರೂ ನಾವು ಈ ಯೋಜನೆಯನ್ನ ಮಾಡುತ್ತೇವೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ. ಮೈಸೂರಿನ ತಲಕಾಡಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಮಾತನಾಡಿದ ಅವರು, ವಿರೋಧಗಳನ್ನೆಲ್ಲಾ ಪಕ್ಕಕ್ಕಿಟ್ಟು ರೋಪ್ ವೇ ಮಾಡುತ್ತೇವೆ ಎಂದರು.
![](https://nannurumysuru.com/wp-content/uploads/2021/07/20210720_023050-1024x689.jpg)
ಮೊದಲಿಗೆ ವಿರೋಧ ವ್ಯಕ್ತವಾದ್ರೂ ತದನಂತರ ಅವರೇ ಒಪ್ಪಿಕೊಳ್ಳುತ್ತಾರೆ. ಈಗಾಗಲೇ ಚಾಮುಂಡಿ ಬೆಟ್ಟದ ರೋಪ್ ವೇಗೆ ಡಿಪಿಆರ್ ತಯಾರಾಗಿದ್ದು ಸಿದ್ದತೆ ಆಗಬೇಕಿದೆ ಎಂದು ಮೈಸೂರಿನ ತಲಕಾಡಿನಲ್ಲಿ ಸಚಿವ ಯೋಗೇಶ್ವರ್ ಹೇಳಿದ್ದಾರೆ.
![](https://nannurumysuru.com/wp-content/uploads/2023/09/Nayana-Kumars.jpg)