ಮತ್ತೇ ಚಾಮುಂಡಿ ಬೆಟ್ಟದ ನಂದಿ ಮಾರ್ಗದ ರಸ್ತೆ ಕುಸಿತ!

1 min read

ಮೈಸೂರಿನಲ್ಲಿ ಭಾರೀ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ನಂದಿ ರಸ್ತೆ ಮಾರ್ಗದ ಬಳಿ ರಸ್ತೆ ಕುಸಿದಿತ್ತು. ಇದನ್ನ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಮಳೆಯಿಂದಾಗಿ ದುರಸ್ತಿ ಕಾರ್ಯ ನಿಲ್ಲಿಸಿದ್ರು. ಆದ್ರೀಗಾ ಕುಸಿದ ಜಾಗದಲ್ಲೇ ಮತ್ತೆ ಭೂಕುಸಿತವಾಗಿ ಆತಂಕ ಸೃಷ್ಟಿಸಿದೆ.


ಹೌದು, ಎರಡು ವಾರದ ಹಿಂದಷ್ಟೇ ಭಾರಿ ಮಳೆಗೆ ನಂದಿ ಮಾರ್ಗದ ರಸ್ತೆ ಕುಸಿದಿತ್ತು. ಈ ವೇಳೆ ಸ್ಥಳಕ್ಕೆ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸೇರಿ ಸ್ಥಳೀಯ ಶಾಸಕ ಜಿಟಿ ದೇವೇಗೌಡ ಕೂಡ ಭೇಟಿ ನೀಡಿ ರಸ್ತೆ ದುರಸ್ತಿಗೆ ಸೂಚನೆ ನೀಡಿದ್ದರು.

ಇದೀಗಾ ರಸ್ತೆಯ ದುರಸ್ತಿ ಕಾರ್ಯ ನಿಧಾನವಾದ ಹಿನ್ನೆಲೆಯಲ್ಲಿ ಮತ್ತೇ ಅದೇ ರಸ್ತೆ ಮಾರ್ಗದ ಜಾಗದಲ್ಲಿ ಭೂ ಕುಸಿತ ಉಂಟಾಗಿದೆ. ಇದರಿಂದ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ದುರಸ್ತಿಗೆ ತಜ್ಞರು ಸಲಹೆ ನೀಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ವಿಳಂಬ ಮಾಡ್ತಿರೋದು ಸಾಕಷ್ಟು ಸಮಸ್ಯೆ ತಂದೊಡ್ಡುವ ಆತಂಕ ಎದುರಾಗಿದೆ.

About Author

Leave a Reply

Your email address will not be published. Required fields are marked *