ಮೈಸೂರು : ದರೋಡೆ ಶೂಟ್‌ಔಟ್- ಬಾಂಬೆ ಬುಡ್ಡ ಅರೆಸ್ಟ್!

1 min read

ಮೈಸೂರಿನಲ್ಲಿ ನಡೆದಿದ್ದ ದರೋಡೆ, ಶೂಟ್‌ಔಟ್ ಪ್ರಕರಣದ ಮತ್ತೋರ್ವ ಆರೋಪಿ ಖತರ್ನಾಕ್ ಬಾಂಬೆ ಬುಡ್ಡಾ ಅಂದರ್ ಆಗಿದ್ದಾನೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ದರೋಡೆಕೋರ ಮುದುಕ ಹಾಗೂ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಈತನನ್ನ ಮೈಸೂರು ಖಾಕಿ ಪಡೆ ಸೆರೆಹಿಡಿದಿದ್ದಾರೆ. ಕೃತ್ಯ ನಡೆಸಿ ಬಾಂಬೆಯಲ್ಲಿ ಅಡಗಿದ್ದ ಬುಡ್ಡಾ ಕೊನೆಗೂ ಪೊಲೀಸ್‌ ಬಲೆಗೆ ಬಿದ್ದಿದ್ದಾನೆ. ಆಗಸ್ಟ್ 23 ರಂದು ಮೈಸೂರಿನಲ್ಲಿ ನಡೆದಿದ್ದ ದರೋಡೆ ಶೂಟೌಟ್ ಘಟನೆ ಸಂಬಂಧ ಎಲ್ಲಾ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ‌‌ ಈ ಮೂಲಕ ಪ್ರಮುಖ ಆರೋಪಿಯನ್ನ ಸೆರೆ ಹಿಡಿದು ದರೋಡೆ ಶೂಟೌಟ್ ಪ್ರಕರಣವನ್ನ ಸದ್ಯಕ್ಕೆ ಪೊಲೀಸರು ಮುಗಿಸಿದ್ದಾರೆ.

-60 ವರ್ಷದ ವೃದ್ಧ ದರೋಡೆಕೋರನ ಸೆರೆಗಾಗಿ ಬಾಂಬೆಯಲ್ಲಿ ಬೀಡುಬಿಟ್ಟಿದ್ದ ಮೈಸೂರು ಪೊಲೀಸರು, ಕಾರ್ಯಚರಣೆ ನಡೆಸಿದರು. ಅಲ್ಲದೆ ಈ ಕೃತ್ಯದ ಮಾಸ್ಟರ್ ಮೈಂಡ್ ಈ ಬುಡ್ಡನೇ ಆಗಿದ್ದ ಎನ್ನಲಾಗಿದೆ. ಇನ್ನು ಮೈಸೂರಿನ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್‌ನಲ್ಲಿ ಈ ಘಟನೆ ನಡೆದು, ದರೋಡೆ ಮಾಡಿ ಶೂಟ್‌ಔಟ್ ಮಾಡಿದ್ದ ಡಕಾಯಿತರು ದಡದಹಳ್ಳಿ ಚಂದ್ರು ಎಂಬಾತನ ಮೇಲೆ ಶೂಟ್ ಮಾಡಿದ್ದರು. ಘಟನೆಯಲ್ಲಿ ಚಂದ್ರು ಮೃತಪಟ್ಟು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

About Author

Leave a Reply

Your email address will not be published. Required fields are marked *