ಮೈಸೂರಲ್ಲಿ ಅಪ್ಪು ಪುತ್ಥಳಿ‌ ನಿರ್ಮಾಣಕ್ಕೆ ಅವಕಾಶ ನಿರಾಕರಣೆ!

1 min read

ಮೈಸೂರಿನಲ್ಲಿ ಅಪ್ಪು ಪುತ್ಥಳಿ ಹಾಕಲು ಅನುಮತಿ ನಿರಾಕರಿಸಿದ ಕಾರಣ ಅಭಿಮಾನಿಗಳು ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದ ಘಟನೆ ನಡೆದಿದೆ. ಅನುಮತಿ ಪಡೆಯದ ಕಾರಣ ಪುನೀತ್ ಪುತ್ಥಳಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಮೈಸೂರಿನ ಲಿಂಗಾಬುದಿ ಪಾಳ್ಯದಲ್ಲಿ ಘಟನೆ ನಡೆದಿದೆ.

ಲಿಂಗಾಬುದಿ ಪಾಳ್ಯದ ರಿಂಗ್ ರಸ್ತೆಯಲ್ಲಿ ಪುನೀತ್ ಪುತ್ಥಳಿ ಸ್ಥಾಪನೆ ತಯಾರಿಗೆ ಸಿದ್ದತೆ ನಡೆದಿತ್ತು, ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಹಾಕಬಾರದೆಂದು ಪೊಲೀಸರು ಪುತ್ಥಳಿ ವಶಕ್ಕೆ ಪಡೆದಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಪುನೀತ್ ಅಭಿಮಾನಿಗಳ ಆಕ್ರೋಶ ಹೊರಹಾಕಿದ್ದು, ಪುತ್ಥಳಿ ವಾಪಸ್ಸು ಕೊಡುವಂತೆ ಆಗ್ರಹಿಸಿದರು. ಸದ್ಯ ಕುವೆಂಪು ನಗರ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

About Author

Leave a Reply

Your email address will not be published. Required fields are marked *