ಪುನೀತ್ ಗೆಳೆತನದ ಸಾರ್ಥಕತೆ ಮೆರೆದ ತಮಿಳು ನಟ ವಿಶಾಲ್!

1 min read

ಗೆಳೆತನ ಅಂದ್ರೆ ಅದಕ್ಕೆ ಸಾವಿಲ್ಲ, ಕೊನೆಯಿಲ್ಲ ಎಂಬುದು ಎಲ್ಲ ಕಡೆ ಸಾಬೀತು ಆಗುತ್ತಲೇ ಇರುತ್ತೆ. ಇವತ್ತು ಅದು ಮತ್ತೊಮ್ಮೆ ಪುನೀತ್ ವಿಚಾರದಲ್ಲಿ ಸಾಬೀತು ಆಗಿದ್ದು ಪುನೀತ್ ಗೆಳೆತನಕ್ಕೆ ಇದು ಸಾಕ್ಷಿಯಾಗಿ ನಿಂತಿದೆ.

ಅಚ್ಚರಿ ಆದರು ಇದು ಸತ್ಯ. ತಮಿಳಿನ ನಟ ವಿಶಾಲ್ ಇದೀಗಾ ಪವರ್ ಸ್ಟಾರ್‌ಗಾಗಿ ತನ್ನ ಗೆಳೆತನದ ಹಾದಿಯನ್ನ ಮತ್ತೊಂದು ಮೈಲಿಗಲ್ಲಿಗೆ ತೆಗೆದುಕೊಂಡು ಹೋಗಿದ್ದು, ತಮಿಳು ನಟ ವಿಶಾಲ್ ಹೃದಯ ವೈಶಾಲ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.

ಯಾಕಂದ್ರೆ ನಟ ಪುನೀತ್, ಓದಿಗೆ ನೆರವು ನೀಡುತ್ತಿದ್ದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನ ಇಂದು ಗೆಳೆಯನಾಗು ನಾನು ಹೊರುತ್ತೇನೆಂದು ನಟ ವಿಶಾಲ್ ಆಶ್ವಾಸನೆ ನೀಡಿದ್ದಾರೆ. ಈ ಮೂಲಕ ಪುನೀತ್ ಸಾವಿನ ಸಾರ್ಥಕತೆ ಹಾಗೂ ಪುನೀತ್ ಇರುವಿಕೆಯನ್ನ ಸಾರಿ ಸಾರಿ ಹೇಳುತ್ತಿದ್ದಾರೆ.

About Author

Leave a Reply

Your email address will not be published. Required fields are marked *