ಬಣ್ಣದಾಟದ ವೇಳೆ ನೀರು ಪಾಲಾದ ಯುವಕ!

1 min read

ಚಾಮರಾಜನಗರ :- ಯುಗಾದಿ ಬಣ್ಣದಾಟ ಆಡಿ ಸ್ನೇಹಿತರೊಟ್ಟಿಗೆ ಕೆರೆಗಿಳಿದ ಬಾಲಕ ನೀರುಪಾಲಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಲ್ಕಟ್ಟೆ ಕೆರೆಯಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ವೈಶಾಲ್(17) ಮೃತ ಬಾಲಕನಾಗಿದ್ದು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಯುಗಾದಿ ಬಣ್ಣದಾಟ ಆಡುತ್ತಿದ್ದು, ಅದರಂತೆ ವೈಶಾಲ್ ತನ್ನ ಸ್ನೇಹಿತರ ಜೊತೆ ಹೋಳಿಯಾಡಿ ಬಣ್ಣ ತೊಳೆದುಕೊಳ್ಳಲು ಕೆರೆಗೆ ಇಳಿದಾಗ ಈ ದುರಂತ ಸಂಭವಿಸಿದೆ.

ಗೆಳೆಯರನ್ನು ಬಿಟ್ಟು ಆಳಕ್ಕೆ ಹೋಗಿದ್ದರಿಂದ ಈಜಲಾಗದೇ ವೈಶಾಲ್​ ಮೃತಪಟ್ಟಿದ್ದಾನೆ ಎನ್ನಲಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದಳದ ಸಿಬ್ಬಂದಿಗಳ ಸಹಕಾರದಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ಗುಂಡ್ಲುಪೇಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

About Author

Leave a Reply

Your email address will not be published. Required fields are marked *