ಕಟಾವಿಗೆ ಬಂದ ಕಬ್ಬು ಬೆಳೆಗೆ ಬೆಂಕಿ- ಹತ್ತಾರು ಏಕರೆ ನಾಶ

1 min read

ಮೈಸೂರಿನ ನಂಜನಗೂಡು ತಾಲ್ಲೂಕಿನ ಸಾಲುಂಡಿ ಗ್ರಾಮದಲ್ಲಿ ಕಬಿನಿ ಗದ್ದೆಗೆ ಬೆಂಕಿ ಬಿದ್ದಿದ್ದು, 20 ಎಕರೆಗೂ ಅಧಿಕ ಕಬ್ಬಿನ ಗದ್ದೆ ನಾಶವಾಗಿದೆ. ಮಧ್ಯಾಹ್ನ 12 ಗಂಟೆ ಸರಿಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹತ್ತಾರು ಏಕರೆ ಕಬ್ಹು ಬೆಳೆ ಬೆಂಕಿಗಾಹುತಿಯಾಗಿದೆ.


ಕಟಾವಿಗೆ ಬಂದಿದ್ದ ಕಬ್ಬು ಕಣ್ಣೆದುರೆ ಸುಟ್ಟು ಹೋದ ಫಸಲನ್ನ ನೋಡಿದ ರೈತರು ಕಂಗಾಲಾಗಿದ್ದು ಬೇಸರ ಹೊರಹಾಕಿದ್ದಾರೆ. ನಾಲ್ಕೈದು ರೈತರ ಸುಮಾರು 20ಕ್ಕೂ ಅಧಿಕ ಎಕರೆಯಲ್ಲಿ ಬೆಳೆಯಲಾಗಿದ್ದ ಕಬ್ಬು ಸುಟ್ಟು ಹೋಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರೋ ಶಂಕೆ ವ್ಯಕ್ತವಾಗಿದೆ. ಸದ್ಯ ಬೆಂಕಿ ನಂದಿಸಲು ರೈತರು ಹರಸಾಹಸಪಡುತ್ತಿದ್ದು, ಗ್ರಾಮಸ್ಥರೆಲ್ಲ ಬೆಂಕಿ ನಂದಿಸುತ್ತಿದ್ದಾರೆ.

About Author

Leave a Reply

Your email address will not be published. Required fields are marked *