ಮೈಸೂರಿನಲ್ಲಿ ಶಕ್ತಿಧಾಮದ ಮಕ್ಕಳ ಜೊತೆ ಮಗುವಾದ ಶಿವಣ್ಣ!

1 min read

ಪುನೀತ್ ರಾಜಕುಮಾರ್ ಅಗಲಿಕೆ ಇನ್ನು ಅಭಿಮಾನಿಗಳು ನಂಬದಂತಹ ಪರಿಸ್ಥಿತಿಗೆ ತಂದಿದ್ದು ಮೈಸೂರಿನ ಶಕ್ತಿಧಾಮದ ಮಕ್ಕಳು ಪುನೀತ್‌ರನ್ನ ಮರಿತಾರಾ? ಖಂಡಿತವಾಗಿಯೂ ಇಲ್ಲ. ಬಹಳ ನಾಜೂಕಿನ ಮನಸ್ಸಿನ ಮಕ್ಕಳಾದ ಇವರಿಗೆ ಪುನೀತ್ ಎಲ್ಲವು ಆಗಿದ್ದರು. ಆದರೆ ಈಗ ಆ ಸ್ಥಾನ ತುಂಬಲು ರಾಜವಂಶದ ರಾಜಕುಮಾರನೇ ಬಂದಿದ್ದಾನೆ. ಅವರೇ ಡಾ.ಶಿವರಾಜ್ ಕುಮಾರ್.

  • ಹೌದು, ಸರಳ ಸಜ್ಜನಿಕೆಯ ವ್ಯಕ್ತಿಯಾಗಿರುವ ಶಿವಣ್ಣ ಇದೀಗಾ ಮೈಸೂರಿನ ಶಕ್ತಿಧಾಮದ ಮಕ್ಕಳ ಪೋಷಕ, ಸ್ನೇಹಿತ, ಶಿಕ್ಷಕ. ಈ ಮಕ್ಕಳ ಜೊತೆ ಆಟವಾಡುತ್ತ ಮಕ್ಕಳ ಮನಸ್ಸಿನಲ್ಲಿ ಪ್ರೀತಿಯನ್ನ ಬಿತ್ತುತ್ತಿದ್ದಾರೆ. ಅಪ್ಪು ಅಗಲಿಕೆಯ ನೋವನ್ನ ದೂರ ಮಾಡಿ, ಮಕ್ಕಳ ಶೈಕ್ಷಣಿಕ ಕ್ರೀಡಾ ಚಟುವಟಿಕೆ ತುಂಬುತ್ತ, ಆ ಮಕ್ಕಳ ಪ್ರೀತಿಯಲ್ಲಿ ಅಪ್ಪುರನ್ನ ಕಾಣುತ್ತಿದ್ದಾರೆ. ಇತ್ತ ಶಕ್ತಿಧಾಮದ ಮಕ್ಕಳು ಶಿವಣ್ಣನಲ್ಲಿ ಅಪ್ಪುರನ್ನ ಕಾಣುತ್ತಿದ್ದಾರೆ. ಹಾಗಾಗಿಯೇ ಮೈಸೂರಿಗೆ ಸದ್ದಿಲ್ಲದೆ ಬಂದು ಹೋಗುತ್ತಿರುವ ಶಿವಣ್ಣ ಮಕ್ಕಳ ಜೊತೆ ಮಗುವಾಗಿ ಆಟವಾಡುತ್ತಿದ್ದಾರೆ.

ಇತ್ತಿಚ್ಚಿಗಷ್ಟೇ ಶಕ್ತಿಧಾಮದ ಮಕ್ಕಳ ಜೊತೆ ಶಿವಣ್ಣ ಮಗುವಾಗಿ ಖೋ ಖೋ ಆಟವಾಡಿ ಖುಷಿಪಟ್ಟಿದ್ದಾರೆ. ಈ ವೇಳೆ ಔಟ್ ಆಗುವ ಶಿವಣ್ಣ ಬಳಿಕ ತಾವು ಫೀಲ್ಡ್‌ಗೆ ಇಳಿದು ಮಕ್ಕಳ ಆಟ ಆಡಿದ್ದಾರೆ. ಈಗಾಗಲೇ ಅಪ್ಪು ಕಳೆದುಕೊಂಡ ದುಖದಲ್ಲಿ ಶಿವಣ್ಣ, ಮಕ್ಕಳು, ಅಭಿಮಾನಿಗಳು ಈ ಸಣ್ಣಪುಟ್ಟ ಆಟದ ನಡುವೆಯು ಅಪ್ಪುರನ್ನ ನಿತ್ಯ ನೆನಪು ಮಾಡಿಕೊಳ್ತಿರೋದು ಸಂತಸವೇ ಸರಿ

About Author

Leave a Reply

Your email address will not be published. Required fields are marked *