ರೈಡರ್‌ ಬೆನ್ನತ್ತಿದ ಪೈರಸಿ ಭೂತ!

1 min read

ರೈಡರ್‌ ಚಿತ್ರಕ್ಕೆ ಪೈರಸಿ ಭೂತ ಬೆನ್ನೆರಿದ್ದು ಚಿತ್ರ ನಿರ್ಮಾಪಕ ಲಹರಿ ವೇಲು ಬೆಂಗಳೂರಿನ ಸೈಬರ್‌ ಕ್ರೈಂ ದೂರು ನೀಡಿದ್ದಾರೆ. ಬಹು ನಿರೀಕ್ಷಿತ ಯುವರಾಜ ನಿಖಿಲ್‌ ಕುಮಾರಸ್ವಾಮಿ ಅಭಿನಯದ ರೈಡರ್ ಚಿತ್ರ ಈಗಾಗಲೇ ಸಾಕಷ್ಟು ಜನಮನ್ನಣೆಗಳಿಸುತ್ತಿದೆ. ಇದರ ಬೆನ್ನಲ್ಲೇ ಚಿತ್ರ ಬಿಡುಗಡೆಯಾದ ಕೇವಲ ಎರಡೇ ದಿನಕ್ಕೆ ತಮಿಳು ರಾಕರ್ಸ್ ಎಂಬುವವರಿಂದ ಪೈರಸಿ ಆಗಿದೆ ಎಂದು ಚಿತ್ರತಂಡ ಆರೋಪಿಸಿ ದೂರು ನೀಡಿದೆ.

ದೂರು ನೀಡಿ ಮಾತನಾಡಿದ ಲಹರಿ ವೇಲು ಅವರು, ಪೈರಸಿ ನಮ್ಮ ಚಿತ್ರ ರಂಗಕ್ಕೆ ಒಂದು ದೊಡ್ಡ ಕಂಟಕವಾಗಿದ್ದು, ರೈಡರ್ ರಿಲೀಸ್ ಆದ ಎರಡನೇ ದಿನವೇ ಈ ಕಾಟ ಶುರುವಾಗಿದೆ. ಈಗಾಗಲೇ ನಮ್ಮ ಚಿತ್ರ ಸೂಪರ್ ಹಿಟ್ ಆಗಿದೆ. ಆದರೆ ಕೆಲ ಕಿಡಿಗೇಡಿಗಳು ನಮ್ಮ ಚಿತ್ರ ಪೈರಸಿ ಮಾಡಿ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ಬೇಸರ ಹೊರಹಾಕಿದ್ರು.

ಇನ್ನು ಮೈಸೂರಿಗೆ ಬಂದಿದ್ದ ಚಿತ್ರತಂಡ ಲಿಡೋ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಣೆ ಮಾಡಿ ಅಭಿಮಾನಿಗಳ ಜೊತೆ ಸಂತಸ ಹಂಚಿಕೊಂಡ್ರು. ಅಲ್ಲದೆ ನಮ್ಮ ಚಿತ್ರ ಅದ್ಭತವಾಗಿ ಮೂಡಿ ಬಂದಿದೆ. ಆದ್ರೆ ನಿರ್ಮಾಪಕರು ಎಷ್ಟು ಕಷ್ಟ ಪಟ್ಟು ಚಿತ್ರ ಮಾಡಿದ್ದಾರೆ ಎಂಬುದು ನಿಮಗೆ ಸಮಸ್ಯೆ ಆದಾಗಲೇ ಗೊತ್ತುಗುತ್ತೆ ಎಂದು ನಿರ್ದೇಶಕ ಕೂಡ ಬೇಸರ ಹೊರಹಾಕಿದ್ರು.

About Author

Leave a Reply

Your email address will not be published. Required fields are marked *