ಬಿಜೆಪಿ ಪರ ಶಾಸಕ ರಾಮದಾಸ್ ಪ್ರಚಾರ ಸಭೆ!

1 min read

ಮೈಸೂರು : ಡಿಸಂಬರ್ 10 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ದೃಷ್ಟಿಯಿಂದ ತಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಕ್ಷೇತ್ರದ ಉಸ್ತುವಾರಿಗಳಾದ ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ ರಾಮದಾಸ್ ಅವರು ಸಭೆಯನ್ನು ತೆಗೆದುಕೊಂಡರು. ತಲಕಾಡು, ಕಲಿಯೂರು, ದೊಡ್ಡಾಪುರ, ಹೊಳೆಸಾಲು, ಬಿ.ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತ್ ನ ಸದಸ್ಯರುಗಳು ಹಾಗೂ ಬಿಜೆಪಿ ಪ್ರಮುಖರೊಂದಿಗೆ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಬಹಳ ಜನ ವಿದ್ಯಾವಂತರು, ಪದವೀಧರರು ಇಂಥವರು ಪಂಚಾಯತ್ ಸದಸ್ಯರಾಗಿರುವುದು ವಿಶೇಷ. ಕೇಂದ್ರ ಸರ್ಕಾರದ ಯೋಜನೆಗಳನ್ನು ಅರಿವು ಮಾಡಿಕೊಟ್ಟು ಜನ ಸಾಮಾನ್ಯರಿಗೆ ಮುಟ್ಟುವತ್ತ ನಾವೆಲ್ಲರೂ ಕೆಲಸ ನಿರ್ವಹಿಸಬೇಕಿದೆ. ಪಂಚಾಯತ್ ಮಟ್ಟದಲ್ಲಿ ಅಭಿವೃದ್ಧಿ ಮಾಡಿದರೆ ಸರ್ಕಾರ ಕಟ್ಟ ಕಡೆಯ ವ್ಯಕ್ತಿಗೂ ತಲುಪುತ್ತದೆ ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸೋಣ ಎಂದರು.

  • ಮುಂಬರುವ ವಿಧಾನ ಪತಿಷತ್ ಚುನಾವಣೆಯಲ್ಲಿ ಭಾಜಪಾ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಶ್ರಮ ವಹಿಸೋಣ. ಪಂಚಾಯತಿ ಸದಸ್ಯರಿಗೆ ಚುನಾವಣೆ ಮಹತ್ವ ಹಾಗೂ ಹಾಗೂ ಗ್ರಾಮ ಪಂಚಾಯತಿ ಸದಸ್ಯರನ್ನು ಭೇಟಿ ಮಾಡಿ ಮನವೊಲಿಸುವ ಎರಡೂ ಕಾರ್ಯ ಕೂಡಾ ಇವತ್ತಿಂದ ಪ್ರಾರಂಭವಾಗಬೇಕು ಹಾಗೂ ಮೊದಲ ಪ್ರಾಶಸ್ತ್ಯ ಮತವನ್ನು ಭಾಜಪಾ ಅಭ್ಯರ್ಥಿ ಗೆ ನೀಡಬೇಕು ಎಂದು ಶಾಸಕರು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಒಟ್ಟಾರೆ ಚುನಾವಣೆ ದೃಷ್ಟಿಯಿಂದ ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಅತಿ ಹೆಚ್ಚಿನ ಮತ ಬರುವ ರೀತಿಯಲ್ಲಿ ಇವತ್ತಿನ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ತಿ ನರಸೀಪುರ ಬಿಜೆಪಿ ಅಧ್ಯಕ್ಷರಾದ ಲೋಕೇಶ್, ಮಾಜಿ ವಿಧಾನಪರಿಷತ್ ಸದಸ್ಯರಾದ ಸಿ ರಮೇಶ್, ಪ್ರಮುಖರಾದ ಭಾರತೀ ಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್, ಸಿದ್ಧಮಲ್ಲಪ್ಪ, ಮರಿಸ್ವಾಮಿ, ಕರವಟ್ಟಿ ಮಹಾದೇವಯ್ಯನವರು, ಇನ್ನುಳಿದ ಪ್ರಮುಖರು ಹಾಜರಿದ್ದರು

About Author

Leave a Reply

Your email address will not be published. Required fields are marked *