ಮೈಸೂರು : ಧನಂಜಯನ ಹೆಗಲಿಗೆ 400 ಕೆಜಿ ತೂಕದ ಭಾರ!

1 min read

ನಾಡಹಬ್ಬ ಮೈಸೂರು ದಸರಾ ಕಳೆಗಟ್ಟಿದ್ದು ಎರಡನೇ ದಿನವೂ ಭಾರ ಹೊರುವ ತಾಲೀಮು ಮುಂದುವರೆದಿದೆ. ನಿನ್ನೆ ಅಭಿಮನ್ಯುಗೆ ಭಾರ ಹೊರುವ ತಾಲೀಮು ನಡೆದಿತ್ತು. ಆದರೆ ಇಂದು ಧನಂಜಯನ ಹೆಗಲಿಗೆ ಭಾರದ ಮರಳು ಮೂಟೆ ಹೊರಿಸಿ ತಾಲೀಮು ನಡೆಸಲಾಯಿತು. ಧನಂಜಯನ ನೇತೃತ್ವದಲ್ಲಿ ನಡೆದ ಭಾರ ಹೊರುವ ಕಾರ್ಯ ನಡೆದಿದ್ದು, ಸುಮಾರು 400 ಕೆ.ಜಿ‌ ಭಾರ ಹೊತ್ತು ಧನಂಜಯ ತಾಲೀಮು ಮುಗಿಸಿದ್ದಾನೆ.

ಮರಳು ಮೂಟೆ ಹೊತ್ತು ಸಾಗಿದ ಧನಂಜಯ ಆನೆ

ಇನ್ನು ಮೈಸೂರಿನ ಅಂಬಾವಿಲಾಸ 2 ರೌಂಡ್ ಭಾರ ಹೊತ್ತು ಸಾಗಿದ ಧನಂಜಯನಿಗೆ ಉಳಿದ ಆನೆಗಳು ಸಹ ಜೊತೆಯಾಗಿ ಹೆಜ್ಜೆ ಹಾಕಿದವು. ಈ ಬಾರಿ ಕೇವಲ 3 ಆನೆಗಳಿಗೆ ಮಾತ್ರ ಭಾರ ಹೊರಿಸಿ ತಾಲೀಮು ನಡೆಯಲಿದ್ದು, ನಿನ್ನೆ ಮೊದಲ ದಿನ ಭಾರ ಹೊತ್ತು ಸಾಗಿದ್ದ ಅಭಿಮನ್ಯುವಿಗೆ ತಾಲೀಮು ಆಗಿದ್ದು, ನಾಳೆ ಗೋಪಾಲಸ್ವಾಮಿ ಆನೆಗೆ ಭಾರದ ತಾಲೀಮು ನಡೆಯಲಿದೆ. ಸದ್ಯ ದಿನೆ ದಿನೆ ಬದಲಿ ದಿನಗಳಲ್ಲಿ ಆನೆಗಳಿಗೆ ಭಾರ ಹೊರಿಸುತ್ತೇವೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

About Author

Leave a Reply

Your email address will not be published. Required fields are marked *