ಡಿ ಬಾಸ್ ನೀಡಿದ ಅದೊಂದು ಕರೆ ಪವಾಡದ ರೀತಿ ದಾಖಲೆಯೇ ನಿರ್ಮಾಣವಾಯ್ತು!
1 min read![](https://nannurumysuru.com/wp-content/uploads/2021/06/IMG-20210623-WA0111_copy_1024x684.jpg)
ಚಾಲೆಂಜಿಂಗ್ ಸ್ಟಾರ್ ದರ್ಶನ್ರ ಅದೊಂದು ಕರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಮೃಗಾಲಯಕ್ಕೆ ಕೋಟಿ ಕೋಟಿ ದೇಣಿಗೆ ಹರಿದು ಬಂದಿದೆ. ಬರೋಬ್ಬರಿ 3ಕೋಟಿ ದೇಣಿಗೆ ಬಂದಿದ್ದು, ಈ ಬಗ್ಗೆ ಅಧಿಕೃತವಾಗಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಮಾಹಿತಿ ನೀಡಿದ್ದಾರೆ. ವೀಡಿಯೋ ಮೂಲಕ ಪ್ರಾಣಿ ದತ್ತು ತೆಗೆದುಕೊಳ್ಳುವಂತೆ ನಟ ದರ್ಶನ್ ಕರೆ ನೀಡಿದ್ರು.
![](https://nannurumysuru.com/wp-content/uploads/2021/06/IMG-20210623-WA0112-818x1024.jpg)
ರಾಜ್ಯದ 9ಮೃಗಾಲಯಗಳಿಗೆ ಪ್ರಾಣಿ ಪ್ರಿಯರಿಂದ ನೆರವು ನೀಡಿ ಪ್ರಾಣಿ ಸಂಕುಲ ಕಾಪಾಡಿ ಎಂದು ಮನವಿ ಮಾಡಿದ್ರು. ಇದೊಂದು ಮನವಿಗೆ Zoos ಆ್ಯಪ್ ಕರ್ನಾಟಕ ವತಿಯಿಂದ ಪ್ರಾಣಿ ದತ್ತು ಸ್ವೀಕಾರವಾಗಿದ್ದು, ಸುಮಾರು 6ಸಾವಿರಕ್ಕೂ ಅಧಿಕ ಜನರಿಂದ ಪ್ರಾಣಿ ದತ್ತು ಸ್ವೀಕಾರ ಮಾಡಿದ್ದಾರೆ.
![](https://nannurumysuru.com/wp-content/uploads/2023/09/Nayana-Kumars.jpg)
![](https://nannurumysuru.com/wp-content/uploads/2021/06/IMG-20210623-WA0113-1024x836.jpg)
ಕೇವಲ 20ದಿನಗಳಲ್ಲಿ ಎರಡು ಕೋಟಿ ದೇಣಿಗೆ ಸಂಗ್ರಹವಾಗಿದ್ದು, ಕೋವಿಡ್ ಸಮಯದಲ್ಲೇ ಮೃಗಾಲಯದ ನೆರವಿಗೆ ನಿಂತ ಪ್ರಾಣಿಪ್ರಿಯರಿಂದ ಮೂರು ಕೋಟಿ ದಾಖಲೆ ದೇಣಿಗೆ ಸಂಗ್ರಹವಾಗಿದೆ. ಪ್ರಾಣಿ ದತ್ತು ಪಡೆದವರಿಗೆ ದರ್ಶನ್ ಭೇಟಿ ಮಾಡುವ ಅವಕಾಶ ಹಾಗೂ ಪ್ರತಿ ಮೃಗಾಲಯದಲ್ಲಿ ಆಯ್ದ 50ಜನರಿಗೆ ದರ್ಶನ್ ರಿಂದ ಪ್ರಶಂಸನಾ ಪತ್ರ ನೀಡಲಿದ್ದು, ದರ್ಶನ್ ಮನವಿಗೆ ಓಗೊಟ್ಟು ಚಿತ್ರ ನಟರಿಂದಲೂ ದತ್ತು ಸ್ವೀಕಾರ ಮಾಡಲಾಗಿದೆ.
![](https://nannurumysuru.com/wp-content/uploads/2021/06/IMG-20210623-WA0110.jpg)
ಈ ಮೂಲಕ ಮೃಗಾಲಯದಲ್ಲಿ ನವಿಲು ಹಾಗೂ ನಾಗರಹಾವನ್ನೇ ಹೆಚ್ಚು ಪ್ರಾಣಿ ಪ್ರಿಯರು ದತ್ತು ಪಡೆದಿದ್ದು, ಇಂದಿನಿಂದ ಬೆಳಗಾವಿ, ಗದಗ್ ಹಾಗೂ ಹಂಪಿ ಜೂ ಓಪನ್ ಮಾಡಲಾಗಿದೆ.
![](https://nannurumysuru.com/wp-content/uploads/2021/06/IMG-20210623-WA0109.jpg)
ಅಲ್ಲದೆ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಿದ್ದು, ಸ್ಥಳದಲ್ಲೇ ಕೋವಿಡ್ ಪರೀಕ್ಷೆ ನಡೆಸಿ ಮೃಗಾಲಯ ವೀಕ್ಷಣೆಗೆ ಅವಕಾಶ ಕೊಡಲಾಗಿದೆ ಎಂದು ಮೈಸೂರಿನಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾಹಿತಿ ನೀಡಿದ್ದಾರೆ.