ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ- ಆದರು ಹಂಗಾಮಿ ಸಿಎಂ ಆದ ಬಿಎಸ್ವೈ.!

1 min read

ಬಿಎಸ್ ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ‌ ಮೂಲಕ ಮಾಜಿ ಸಿಎಂ ಆಗಿದ್ದರು ಸಹ ಅವರಿಗೆ ರಾಜ್ಯಪಾಲರು ಹಂಗಾಮಿ ಸಿರಂ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ‌ ಮೂಲಕ ಬಿಎಸ್ವೈ ಸಂಪುಟದ ಸಚಿವರೆಲ್ಲರು ಕೂಡ ಇದೀಗಾ ಮಾಜಿ ಸಚಿವರಾಗಿದ್ದಾರೆ.

ಯಡಿಯೂರಪ್ಪ ರಾಜೀನಾಮೆ ಅಂಗೀಕಾರ

ಹೌದು, ರಾಜ್ಯಪಾಲರು ಯಡಿಯೂರಪ್ಪ ರಾಜೀನಾಮೆ ಪಡೆದು ಸಚಿವ ಸಂಪುಟವನ್ನ ವಿಸರ್ಜನೆ ಮಾಡಿದ್ದು ಈ ಮೂಲಕ ಹಾಲಿ ಸಚಿವರೆಲ್ಲರು ಮಾಜಿ ಸಚಿವರಾಗಿದ್ದಾರೆ. ಆದರೆ ಆಡಳಿತ ದೃಷ್ಠಿಯಿಂದ ಯಡಿಯೂರಪ್ಪನವರನ್ನೆ ಮುಂದಿನ ಸಿಎಂ ಆಯ್ಕೆ ಆಗುವವರೆಗೂ ಹಂಗಾಮಿ ಸಿಎಂ ಆಗಿ ರಾಜ್ಯಪಾಲರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ನಾಳೆ ಕೇಂದ್ರದಿಂದ ಬಿಜೆಪಿ ವೀಕ್ಷಕರು ಬಂದ ಬಳಿಕ ಸಿಎಂ ಅಭ್ಯರ್ಥಿ ಯಾರೆಂದು ಫೈನಲ್ ಆಗಲಿದ್ದು, ಸಿಎಂ ಪ್ರಮಾಣ ವಚನ ಸ್ವೀಕಾರದ ವರೆಗು ಯಡಿಯೂರಪ್ಪ ಹಂಗಾಮಿ ಸಿಎಂ ಆಗಿರಲಿದ್ದಾರೆ.

About Author

Leave a Reply

Your email address will not be published. Required fields are marked *