ಮನೆ ಮನೆಗೆ ತೆರಳಿ ಕೊರೋನಾ ಸೋಂಕಿತರ ಆರೋಗ್ಯ ವಿಚಾರಿಸಿದ ಶಾಸಕ ರಾಮದಾಸ್
1 min read![](https://nannurumysuru.com/wp-content/uploads/2021/05/ramdas-1-1.jpg)
ಮೈಸೂರು: ಇಂದು ಬೆಳಗ್ಗೆ ಶಾಸಕ ಎಸ್ ಎ ರಾಮದಾಸ್ ರವರ ನೇತೃತ್ವದಲ್ಲಿ ಕೋವೀಡ್ ಮಹಾಮಾರಿಯನ್ನು ತಡೆಗಟ್ಟುವ ವಿಷಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತರು, ನಗರಪಾಲಿಕೆ, ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳೊಂದಿಗೆ ವಲಯ ಕಛೇರಿ 3 ರ ವಾಡ್೯ 43 ರ ಶಾರದದೇವಿ ನಗರ ಮತ್ತು 57 ರ ಕುವೆಂಪುನಗರ ಭಾಗದಲ್ಲಿ ಕೊವಿಡ್ ಪಾಸಿಟಿವ್ ಬಂದಂತಹ ಮನೆಗಳಿಗೆ ಟಾಸ್ಕ್ ಫೋರ್ಸ್ ತಂಡದೊಂದಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.
ಅವರ ಸುರಕ್ಷತೆ ದೃಷ್ಟಿಯಿಂದ
![](https://nannurumysuru.com/wp-content/uploads/2023/09/Nayana-Kumars.jpg)
1.ಕೋವಿಡ್ ಪಾಸಿಟಿವ್ ಆದವರ ಮನೆಯ ಮುಂದೆ ಬಿಳಿ ಬಾವುಟ ಹಾಕುವ ಕಾರ್ಯ
2. ಕೋವಿಡ್ ಸೋಂಕಿತರಿಗೆ ಮೆಡಿಸನ್ ಕಿಟ್ ವಿತರಣೆ
3.ಕೋವಿಡ್ ಸೋಂಕಿತರ ಮನೆಯ ಬಳಿಯಲ್ಲಿ ಸ್ಯಾನಿಟೈಸ್ ಮಾಡಿಸುವ ಕಾರ್ಯವನ್ನು ಮಾಡಿದರು.
![](https://nannurumysuru.com/wp-content/uploads/2021/05/WhatsApp-Image-2021-05-20-at-1.59.09-PM-1024x682.jpeg)
ಅಲ್ಲದೆ ಮೈಸೂರು ನಗರದಲ್ಲಿ ವಿಶೇಷವಾಗಿ ಮನೆ ಮನೆ ಸಮೀಕ್ಷೆ ಪ್ರಾರಂಭವಾಗಿದೆ, ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ಆಕ್ಸಿಮೀಟರ್, ಥರ್ಮಲ್ ಸ್ಕ್ಯಾನರ್ ಬಳಸಿ ಆಕ್ಸಿಜನ್ ಮಟ್ಟ ಹಾಗೂ ದೇಹದ ತಾಪಮಾನವನ್ನು ಪರೀಕ್ಷೆ ಮಾಡುತ್ತಾರೆ, ಆಕ್ಸಿಜನ್ ಮಟ್ಟ 94 ಕ್ಕಿಂತ ಕಡಿಮೆ ಇದ್ದರೆ ಅಥವಾ ದೇಹದ ತಾಪಮಾನ 38 ಡಿಗ್ರಿ ಗಿಂತ ಹೆಚ್ಚಿದ್ದರೆ ಅಂಥವರನ್ನು ಕೋವಿಡ್ ಮಿತ್ರಾ ಗೆ ಕಳುಹಿಸಲಾಗುತ್ತದೆ. ಈ ಕಾರ್ಯಕ್ಕೆ ಮಾನ್ಯ ಶಾಸಕರಾದ ಎಸ್.ಎ ರಾಮದಾಸ್ ಅವರು ಸಾಂಕೇತಿಕವಾಗಿ ಚಾಲನೆ ನೀಡಿದರು.
ಸದರಿ ಕಾರ್ಯಕ್ರಮದಲ್ಲಿ ಸ್ಥಳೀಯ ನಗರಪಾಲಿಕಾ ಸದಸ್ಯರಾದ ಗೋಪಿ ಬಿಜೆಪಿ ಪ್ರಮುಖರಾದ ಜಗದೀಶ್, ರಮೇಶ್, ಬಸವರಾಜ್, ಮಧು, ಶಿವಣ್ಣ, ಶಾಂತವೀರಪ್ಪ, ಡಿಪೋ ರವಿ, ರೋಹಿತ್, ರವಿ, ಅಶೋಕ್, ನಗರಪಾಲಿಕಾ ಆರೋಗ್ಯ ಅಧಿಕಾರಿಗಳು, ವಲಯ ಆಯುಕ್ತರುಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು, ಆಶಾ ಕಾರ್ಯಕರ್ತರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಪೊಲೀಸ್ ಠಾಣೆಯ ನಿರೀಕ್ಷಕರು ಹಾಜರಿದ್ದರು.