ಲಾಕ್ಡೌನ್ ಹಿನ್ನಲೆ: ಮೈಸೂರಿನಿಂದ ತಮ್ಮ ತಮ್ಮ ಊರಿಗೆ ಹೊರಟ ಜನರು
1 min read![](https://nannurumysuru.com/wp-content/uploads/2021/04/KSRTC.jpg)
ಮೈಸೂರು: ಕೋವಿಡ್ 19ನ ಎರಡನೇ ಅಲೆ ತಡೆಯಲು ಮಂಗಳವಾರ ರಾತ್ರಿಯಿಂದ ರಾಜ್ಯ ಸರ್ಕಾರ ಘೋಷಿಸಿರುವ ಜನತಾ ಕರ್ಫ್ಯೂ( ಲಾಕ್ಡೌನ್ ) ಜಾರಿಗೆ ಬರವ ಹಿನ್ನೆಲೆಯಲ್ಲಿ ಜನರು ತಮ್ಮ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳತ್ತ ಮುಖ ಮಾಡಿರುವ ಜನರು ಲಗೇಜ್ ಪ್ಯಾಕ್ ಮಾಡಿಕೊಂಡು ತನ್ನೂರಿನತ್ತ ತೆರಳುತ್ತಿರುವ ದೃಶ್ಯ ನಗರದ ಬಸ್ ನಿಲ್ದಾಣಗಳಲ್ಲಿ ಕಂಡುಬಂತು.
![](https://nannurumysuru.com/wp-content/uploads/2023/09/Nayana-Kumars.jpg)
![](https://nannurumysuru.com/wp-content/uploads/2021/04/WhatsApp-Image-2021-04-27-at-10.22.30-AM-1.jpeg)
ಮೈಸೂರಿನಿಂದ ಕೇರಳ ಹಾಗೂ ಬೆಂಗಳೂರಿಗೆ ಹೆಚ್ಚು ಜನರ ಪಯಣ ಬೆಳಸುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಹಿಡಿದು ಕುಟುಂಬಸ್ಥರ ವರೆಗು ತಮ್ಮೂರಿನತ್ತ ಹೊರಟಿದ್ದಾರೆ.
ಇನ್ನು ಒಂದೊಂದು ನಿಮಿಷಕ್ಕು KSRTC ಅಧಿಕಾರಿಗಳು ಬಸ್ ವ್ಯವಸ್ಥೆ ಮಾಡಿದ್ದಾರೆ. ನನ್ನೂರು ಮೈಸೂರಿನಲ್ಲಿ ಬಸ್ ನಿಲ್ದಾಣದ ಸಂಪೂರ್ಣ ಚಿತ್ರಣ.