ಹಿರಿಯ ನಾಗರೀಕರು, ವೃದ್ಧರ ನೆರವಿಗೆ ನಿಂತ ಮೈಸೂರು ನಗರ ಪೊಲೀಸರ ಅಭಯ ಟೀಂ
1 min read![](https://nannurumysuru.com/wp-content/uploads/2021/05/Mysuru-Police.jpg)
ಮೈಸೂರು: ಲಾಕ್ ಡೌನ್ ಹಿನ್ನೆಲೆ, ಮೈಸೂರಿನ ಹಿರಿಯ ನಾಗರೀಕರಿಗೆ ಮೈಸೂರು ನಗರ ಪೊಲೀಸರ ಸಹಾಯ ಮಾಡಲು ಮುಂದಾಗಿದ್ದಾರೆ.
ಹಿರಿಯ ನಾಗರೀಕರು, ವೃದ್ಧರ ನೆರವಿಗೆ ಅಭಯ ಟೀಂ ನಿಂತಿದೆ. ಸಂಕಷದಲ್ಲಿರುವ ಹಿರಿಯ ನಾಗರೀಕರು ಹಾಗೂ ವೃದ್ಧರಿಗೆ ನೆರವಾಗುವಂತೆ ಪೊಲೀಸ್ ಆಯುಕ್ತ ಚಂದ್ರಗುಪ್ತ ಸೂಚನೆ ನೀಡಿದ್ದಾರೆ.
![](https://nannurumysuru.com/wp-content/uploads/2023/09/Nayana-Kumars.jpg)
ಅಗತ್ಯವಸ್ತು ಖರೀದಿಗೆ ಕಷ್ಟಪಡುವ ಹಿರಿಯ ನಾಗರೀಕರು. ಪೊಲೀಸ್ ಕಂಟ್ರೋಲ್ ರೂಂ 0821-2418340ಗೆ ಕರೆ ಮಾಡಿ ಮಾಹಿತಿ ನೀಡಿದ್ರೆ ಸಾಕು. ಹತ್ತಿರದ ಪೊಲೀಸ್ ಠಾಣೆ ಅಥವಾ ಅಭಯ ಯೋಜನಗೆ ನಿಯೊಜನೆಗೊಂಡ ಪೊಲೀಸರಿಂದ ಸಹಾಯ ದೊರೆಯಲಿದೆ. ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
![](https://nannurumysuru.com/wp-content/uploads/2021/05/E1BrkhQUYAEszAn.png)