ಕೊರೋನಾದಿಂದ ಮೃತಪಟ್ಟ ನೌಕರನ ತಾಯಿಯನ್ನ ಅಪ್ಪಿ ಸಾಂತ್ವನ ಹೇಳಿದ ಪಾಲಿಕೆ ಆಯುಕ್ತೆ ಶಿಲ್ಪಾನಾಗ್
1 min read![](https://nannurumysuru.com/wp-content/uploads/2021/05/Shilpanag.jpg)
ಮೈಸೂರು: ಕೊರೋನಾದಿಂದ ಮೃತಪಟ್ಟ ಪಾಲಿಕೆ ನೌಕರರ ಕುಟುಂಬಕ್ಕೆ ಮೈಸೂರು ಮೇಯರ್ ರುಕ್ಮಿಣಿ ಮಾದೇಗೌಡ & ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಸಾಂತ್ವನ ಹೇಳಿದ್ದಾರೆ.
![](https://nannurumysuru.com/wp-content/uploads/2021/05/WhatsApp-Image-2021-05-22-at-1.48.32-PM-1024x682.jpeg)
ಈ ವೇಳೆ ಕೋವಿಡ್-ನಿಂದ ಮೃತಪಟ್ಟ ಪಾಲಿಕೆಯ ಪೌರಕಾರ್ಮಿಕರು, ಇಬ್ಬರು ವಾಹನ ಚಾಲಕರ ಕುಟುಂಬಕ್ಕೆ ಸಾಂತ್ವನ ಹೇಳಿ ಮೂವರ ಕುಟುಂಬಕ್ಕು ಪಾಲಿಕೆ ವತಿಯಿಂದ 5 ಲಕ್ಷ ನೀಡಲಾಗಿದೆ. ಈ ವೇಳೆ ಕುಟುಂಬದವರಿಗೆ ಧೈರ್ಯ ತುಂಬಿದ ಮೇಯರ್ ಹಾಗೂ ಪಾಲಿಕೆ ಆಯುಕ್ತೆ.
![](https://nannurumysuru.com/wp-content/uploads/2023/09/Nayana-Kumars.jpg)
ಇನ್ನು ಮೈಸೂರು ಪಾಲಿಕೆಯ ಆಯುಕ್ತೆ ಶಿಲ್ಪಾನಾಗ್ ಅವರು ಮೃತ ರವಿ ತಾಯಿಯನ್ನ ಅಪ್ಪಿ ಸಾಂತ್ವನ ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾನಾಗ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಅಲ್ಲದೆ ಈ ಅದ್ಭುತವಾದ ಮಾನವೀಯ ಕ್ಷಣ ಸಖತ್ ವೈರಲ್ ಆಗಿದೆ.
![](https://nannurumysuru.com/wp-content/uploads/2021/05/WhatsApp-Image-2021-05-22-at-1.48.31-PM-779x1024.jpeg)