September 8, 2024

ಮುಗಿಯದ ಕೋಟಿಗೊಬ್ಬ-3 ನಿರ್ಮಾಪಕ- ವಿತರಕರ’ ಗೊಂದಲ!

1 min read

ಸಿನಿಮಾ : ಅಕ್ಟೋಬರ್ 14 ರ ಆಯುಧ ಪೂಜೆಯಂದು ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಕೆಲವು ವಿತರಕರು ಸಂಚು ಮಾಡಿದ ಕಾರಣ ವಿತರಣೆ ಒಂದು ದಿನ ವಿಳಂಬವಾಗಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿಕೆ ನೀಡಿದ್ದರು. ಇನ್ನು ಮುಂದೆ ಹೋಗಿ ಹೀಗೆ ಸಂಚು ಮಾಡಿದ ವಿತರಕರ ವಿರುದ್ಧ ನಾನು ಕಾನೂನು ಹೋರಾಟ ನಡೆಸುವುದಾಗಿಯು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದರು. ಆದರೆ, ಇದೀಗಾ ಈ ಹೇಳಿಕೆಗೆ ಹಾಗೂ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಸೂರಪ್ಪ ಬಾಬು ಅವರ ವಿರುದ್ಧವೇ ವಿತರಕ ಖಾಜಾಪೀರ್ ಗಂಭೀರ ಆರೋಪ ಮಾಡಿದ್ದು ಕೊಲೆ ಬೆದರಿಕೆಯ ಆರೋಪ ಮಾಡಿದ್ದಾರೆ.

ಹೌದು ನೀಡಿದ ಹಣವನ್ನು ವಾಪಸ್ ಕೊಡದೆ ಸೂರಪ್ಪಬಾಬು ಕೊಲೆ ಬೆದರಿಕೆ ಹಾಕಿರುವುದಾಗಿ ಚಿತ್ರದುರ್ಗದ ಸಿನಿಮಾ ವಿತರಕ ಖಾಜಾಪೀರ್ ಆರೋಪಿಸಿದ್ದಾರೆ. ಖಾಜಾಪೀರ್ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳ ವಿತರಣೆ ಹಕ್ಕು ಪಡೆದಿದ್ದರು.

ಆದರೆ ಸೂರಪ್ಪ ಬಾಬು ಅವರ ರಾಮ್ ಬಾಬು ಸಿನೆಮಾಗೆ 45 ಲಕ್ಷ ರೂಪಾಯಿಯನ್ನು ಆರ್‌ಟಿಜಿಎಸ್ ಮೂಲಕ ಸಂದಾಯ ಮಾಡಿದ್ದು, 5 ಲಕ್ಷ ರೂಪಾಯಿಯನ್ನು ನೇರವಾಗಿ ನೀಡಿದ್ದರೆನ್ನಲಾಗಿದೆ. ಸಿನಿಮಾ ವಿತರಣೆಗಾಗಿ 1.90 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದು, ಸಿನಿಮಾದ ಬಿಡುಗಡೆಗೆ ಅವಕಾಶ ಕೊಡದೆ ಮತ್ತು ಹಣವನ್ನು ಕೂಡ ನೀಡದೆ ಸೂರಪ್ಪಬಾಬು ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.

About Author

Leave a Reply

Your email address will not be published. Required fields are marked *