ಉಚಿತ ಮೆಡಿಕಲ್ ಕಿಟ್ ವಿತರಣೆ!
1 min read![](https://nannurumysuru.com/wp-content/uploads/2021/06/image-4.jpg)
ಮೈಸೂರು: ನರಸಿಂಹ ರಾಜ ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಉಚಿತವಾಗಿ ವಾರ್ಡ್ ನಂಬರ್ 35ರ ವ್ಯಾಪ್ತಿಯ ರಾಘವೇಂದ್ರ ನಗರ ಕಾಲೋನಿಯಲ್ಲಿ ಪ್ರತಿ ಮನೆಗೂ ಮೆಡಿಕಲ್ ಕಿಟ್ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಗಿರಿಧರ್- ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಕರೋನಾ ಸೋಂಕಿತರು ಇದ್ದು ಕರೋನಾ ನಿರ್ಮೂಲನೆ ಮಾಡಲು ಈ ಕ್ಷೇತ್ರದ ಪ್ರತಿಯೊಬ್ಬ ನಾಗರೀಕರ ಕರ್ತವ್ಯ. ಈ ದೃಷ್ಟಿಯಿಂದ ಕ್ಷೇತ್ರದ ಯಾವೊಬ್ಬ ಮನುಷ್ಯನು ಉಪವಾಸದಿಂದ ಇರಬಾರದು ಎಂಬ ನಿಟ್ಟಿನಿಂದ ಎಲ್ಲಾ ನಾಗರೀಕರಿಗೆ ಅಹಾರ ಪಡಿತರ ವಿತರಣೆ ಜೊತೆ ಪ್ರತಿ ಮನೆಗೆ ಔಷಧೀಯ ಕಿಟ್ ಕೊಟ್ಟು ನಿಮ್ಮ ಆರೋಗ್ಯ, ನಿಮ್ಮ ಕೈಯಲ್ಲಿ ಎಂದು ಮನವಿ ಮಾಡಲಾಯಿತು.
![](https://nannurumysuru.com/wp-content/uploads/2023/09/Nayana-Kumars.jpg)
ಇನ್ನು ನಗರ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಜೋಗಿಮಂಜು ಮಾತನಾಡಿ ಈ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರು ವಾಸಿಸುವ ಸ್ಥಳವಾಗಿದ್ದು ಮೈಸೂರು ನಗರ ಕರೋನಾ ಮುಕ್ತ ಮಾಡಲು ಇಂತಹ ಜಾಗಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಕಾರ್ಯಕ್ರಮಗಳನ್ನು ಅತಿ ಹೆಚ್ಚು ಮಾಡಿ ಮೈಸೂರು ನಗರವನ್ನು ಕರೋನಾ ಮುಕ್ತ ಪ್ರದೇಶ ಮಾಡಲು ಎಲ್ಲ ಯುವಕರು ಪಣ ತೋಡಬೇಕು ಎಂದರು.
![](https://nannurumysuru.com/wp-content/uploads/2021/06/WhatsApp-Image-2021-06-07-at-1.13.20-PM-1024x537.jpeg)
ಈ ಸಂದರ್ಭದಲ್ಲಿ ಗಿರಿಧರ್, ಜೋಗಿಮಂಜು, ಆನಂದ್, ಗೋಪಾಲ್, ಮಣಿರತ್ನಂ, ಪ್ರಸಾದ್, ವಿಜಯಕುಮಾರ್ ಸೇರಿ ಹಲವರು ಉಪಸ್ಥಿತರಿದ್ದರು.