ಹುಣಸೂರು: ಕುಡಿದ ಅಮಲಿನಲ್ಲಿ ಸಂಬಂಧಿಕನ ಬರ್ಬರ ಹತ್ಯೆ

1 min read

ಮೈಸೂರು,ಸೆ.18- ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕುಡಿದ ಅಮಲಿನಲ್ಲಿ ಸಂಬಂಧಿಕನ ಕೊಲೆ ಮಾಡಿರುವ ಘಟನೆ ಹುಣಸೂರು ತಾಲ್ಲೂಕಿನ ಧರ್ಮಾಪುರ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಹುಣಸೂರು ತಾಲ್ಲೂಕಿನ ಧರ್ಮಾಪುರ ಗ್ರಾಮದ ದೊಡ್ಡರಾಜು (45) ಕೊಲೆಯಾದ ವ್ಯಕ್ತಿ. ಸಂಬಂಧಿಕ ಕೆಂಡನಾಯಕ ಎಂಬವನು ಪಾನಮತ್ತನಾಗಿ ಮನೆಗೆ ನುಗ್ಗಿ ದೊಡ್ಡರಾಜುನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇದೀಗ ಕೆಂಡನಾಯಕ ಪೊಲೀಸರ ಅತಿಥಿಯಾಗಿದ್ದಾನೆ.

ಈ ಸಂಬಂಧ ಬಿಳಿಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದು, ಕೊಲೆಗೆ ಕೌಟುಂಬಿಕ ಕಲಹ ಹಾಗೂ ಹಣಕಾಸಿನ ವಿಚಾರ ಕಾರಣ ಎಂದು ತಿಳಿದುಬಂದಿದೆ.

About Author

Leave a Reply

Your email address will not be published. Required fields are marked *