ಮೈಸೂರಿನಲ್ಲಿ ಸಿನಿಮಾ ಜೂನಿಯರ್ ಕಲಾವಿದರಿಗೆ ಆಹಾರ ಕಿಟ್ ವಿತರಣೆ
1 min read![](https://nannurumysuru.com/wp-content/uploads/2021/05/food-kit.jpg)
ಮೈಸೂರು: ಕೊರೊನಾ ಮಹಾಮಾರಿ ಇಂದ ನಿಜಕ್ಕೂ ಸಮಸ್ಯೆ ಎದುರಿಸುತ್ತಿರುವುದು ದಿನಗೂಲಿ ನೌಕರರು, ಹಾಗೇಯೇ ಸಿನಿ ಕಾರ್ಮಿಕರು, ಸಿನಿಮಾ ವನ್ನೇ ನಂಬಿ ಬದುಕುತ್ತಿರುವ ಅದೆಷ್ಟೋ ಕಾರ್ಮಿಕರು ಇಂದು ಅಕ್ಷರಶಃ ಪರದಾಡುತ್ತಿದ್ದಾರೆ..
ಲಾಕ್ ಡೌನ್ ಮುಗಿಯುವವರೆಗೂ ಅವರಿಗೆ ಈ ತೊಂದರೆ ತಪ್ಪಿದ್ದಲ್ಲ. ಇಂದು ಮೈಸೂರಿನ ಸಿನಿಮಾ ಜೂನಿಯರ್ ಕಲಾವಿದರಿಗೆ ಉಪೇಂದ್ರ ಮತ್ತು ದಾನಿಗಳು ಆಹಾರ ಕಿಟ್ ಜೊತೆಗೆ ತರಕಾರಿಗಳನ್ನು ವಿತರಿಸಲಾಯಿತು.
![](https://nannurumysuru.com/wp-content/uploads/2023/09/Nayana-Kumars.jpg)
ನಗರದ ಗನ್ ಹೌಸ್ ಶಂಕರ ಮಠದ ಪಕ್ಕದ ಕಲ್ಯಾಣ ಮಂಟಪದಲ್ಲಿ ಜೂನಿಯರ್ ಕಲಾವಿದರ ಸಂಘದ ಮೈಸೂರು ಶಿವು ಅವರ ನೇತೃತ್ವದಲ್ಲಿ ಆಹಾರ ಕಿಟ್ ವಿತರಿಸಲಾಯಿತು.
ಇದೆ ಸಂಧರ್ಭದಲ್ಲಿ ಮಾತಾನಾಡಿದ ಎಲ್ಲಾ ಕಲಾವಿದರು ಉಪೇಂದ್ರ ಅವರ ಕಾರ್ಯವನ್ನು ಶ್ಲಾಘಿಸಿದರು.