ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಐಸಿಯು ಸಿದ್ದತೆ ಪರಿಶೀಲಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

1 min read

ಮೈಸೂರು: ಕೋವಿಡ್-19 ಚಿಕಿತ್ಸೆಗಾಗಿ ಪಿ‌.ಕೆ.ಟಿ.ಬಿ ಆವರಣದಲ್ಲಿನ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಪ್ರಾರಂಭಿಸಿರುವ ಡೆಸಿಗ್ನೇಟೆಡ್ ಕೋವಿಡ್ ಆರೋಗ್ಯ ಕೇಂದ್ರದಲ್ಲಿ ಐಸಿಯು ಘಟಕದ ಅಂತಿಮ ಸಿದ್ಧತೆಯನ್ನು ಬುಧವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪರಿಶೀಲಿಸಿದರು.

ಈ ಆಸ್ಪತ್ರೆಯಲ್ಲಿ 30 ಐಸಿಯು ಹಾಗೂ 40 ಎಚ್‌ಡಿಯು ಹಾಸಿಗೆಗಳು ಚಿಕಿತ್ಸೆಗಾಗಿ ದೊರೆಯಲಿದೆ. ಕ್ರಮೇಣ 100 ಐಸಿಯು ಹಾಸಿಗೆವರೆಗೂ ವಿಸ್ತರಿಸಲಾಗುವುದು. ಕೋವಿಡ್ ವಾರ್ ರೂಂ ಮೂಲಕ ಸೋಂಕಿತರನ್ನು ಚಿಕಿತ್ಸೆಗಾಗಿ ಗುರುವಾರ ಸಂಜೆಯಿಂದ ದಾಖಲು ಮಾಡಿಕೊಳ್ಳಲಾಗುವುದು.

ಜಿಲ್ಲಾಡಳಿತ, ಎಂಎಂಸಿ&ಆರ್‌ಐ, ಶಾಂತವೇರಿ ಗೋಪಾಲಗೌಡ ಆಸ್ಪತ್ರೆ, ಕಲ್ಯಾಣಿ ಮೆರಿಟಾರ್ ಫೌಂಡೇಶನ್‌ ಹಾಗೂ ಆಶಾಕಿರಣ ಚಾರಿಟಬಲ್ ಟ್ರಸ್ಟ್‌ ಸಹಯೋಗದಲ್ಲಿ ಈ ಆಸ್ಪತ್ರೆಯನ್ನು ನಿರ್ವಹಣೆ ಮಾಡಲಾಗುವುದು.

ಇದೇ ಸಂದರ್ಭದಲ್ಲಿ ಪಿ.ಕೆ.ಟಿ.ಬಿ ಆವರಣದಲ್ಲಿ ನಿರ್ಮಿಸುತ್ತಿರುವ 30 ಕೆ.ಎಲ್ ಸಾಮರ್ಥ್ಯದ ಆಕ್ಸಿಜನ್ ಘಟಕವನ್ನು ಕೂಡ ಅವರು ಪರಿಶೀಲಿಸಿದರು.

ಈ ವೇಳೆ ಶಾಸಕರಾದ ಎಲ್.ನಾಗೇಂದ್ರ ಅವರು ಪರಿಶೀಲನೆಯಲ್ಲಿ ಭಾಗಿಯಾಗಿದ್ದರು. ಮೈಸೂರು ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಿ.ಪಿ.ನಂಜರಾಜ, ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಮುಖ್ಯಸ್ಥ ಡಾ.ಸಂತೃಪ್ತ್, ಆಶಾಕಿರಣ ಚಾರಿಟಬಲ್ ಟ್ರಸ್ಟ್‌ನ ಗುರುರಾಜ್, ಕಲ್ಯಾಣಿ ಮೆರಿಟಾರ್ ಫೌಂಡೇಶನ್‌ನ ಮುತ್ತುರಾಜ್, ನೋಡಲ್ ಅಧಿಕಾರಿ ಡಾ.ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *