ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಅದ್ದೂರಿಯಾಗಿ ನೆರವೇರಿದ ತೆಪ್ಪೋತ್ಸವ
1 min readನಂಜನಗೂಡು :
ದೊಡ್ಡ ಜಾತ್ರಾ ಮಹೋತ್ಸವ ಪ್ರಯುಕ್ತ ನಂಜುಡೇಶ್ವರ ಮತ್ತು ಪಾರ್ವತಿ ದೇವಿಯ ಉತ್ಸವ ಮೂರ್ತಿಗಳಿಗೆ ಅರ್ಚಕ ನಾಗಚಂದ್ರ ದೀಕ್ಷಿತ್ ಹಾಗೂ ತಂಡದವರಿಂದ ಕಪಿಲಾ ನದಿಯ ವಿಶೇಷ ಪೂಜಾ ಕೈಂಕರ್ಯಗಳ ಮೂಲಕ ಬಹಳ ವಿಜೃಂಭಣೆಯಿಂದ ತೆಪ್ಪೋತ್ಸವವನ್ನು ನೆರವೇರಿಸಲಾಯಿತು.
ದೇವಾಲಯ ಮತ್ತು ನದಿಯ ಆವರಣ ಸೇರಿದಂತೆ 16 ಕಾಲು ಮಂಟಪವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ತದನಂತರ ಕಪಿಲಾ ನದಿಯ ಪೂರ್ವ ಮತ್ತು ಪಶ್ಚಿಮಾಭಿ ಮುಖವಾಗಿ ತೇಲುವ ತೆಪ್ಪದಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ಮೂರು ಬಾರಿ ವಿರಾಜಮಾನ ಸಾಗುವುದರ ಜೊತೆಗೆ ಹಿಂದೆಂದೂ ಕಂಡಿರಿಯದ ಭಕ್ತ ಸಮೂಹ ಕಪಿಲಾ ನದಿಯ ತೆಪ್ಪೋತ್ಸವದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ತೆಪ್ಪೋತ್ಸವ ನೋಡಲು ಬರುವ ಜನರಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ್ ತಳವಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು.