ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ
1 min readಬೆಂಗಳೂರು: ಕೋವಿಡ್ ಹೊಸ ತಳಿ ಯಾವ ರೀತಿರ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಾವು ನಮ್ಮದೇ ಆದ ಗಮನಿಸುವಿಕೆ ನಿಭಾಯಿಸುವಿಕೆ ಮಾಡುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಕೋವಿಡ್ ಹೊಸ ತಳಿ ತೀವ್ರತೆ ಹಾಗೂ ಅದರ ಪರಿಣಾಮ ಯಾವ ರೀತಿ ಆಗುತ್ತಿದೆ ಎನ್ನುವುದನ್ನು ನಾವು ಗಮನಿಸುತ್ತಿದ್ದೇವೆ. ಸೂಕ್ತ ರೀತಿಯಲ್ಲಿ ಅದನ್ನು ನಿಭಾಯಿಸುತ್ತಿದ್ದೇವೆ. ಜನರು ಕೋವಿಡ್ ನಿಯಮವನ್ನು ತಪ್ಪದೇ ಪಾಲಿಸಿ ಎಂದರು.
ವಿದೇಶದಿಂದ ಬಂದವರ ಬಗ್ಗೆ ನಿಗಾ ಇಡುತ್ತಿದ್ದೇವೆ. ಈಗಾಗಲೇ ಎಸ್ ಡಿ ಎಂ ನಲ್ಲಿ ನಾಲ್ಕು ಸಾವಿರ ಜನರಿಗೆ ಟೆಸ್ಟ್ ಮಾಡಲಾಗುತ್ತಿದೆ.ಎಲ್ಲೆಲ್ಲಿ ಕ್ಲಸ್ಟರ್ ಆಗುತ್ತಿದ್ದೇವೆಯೋ ದೆ ಅಲ್ಲೆಲ್ಲ ಪರೀಕ್ಷೆ ಮಾಡಲಾಗುತ್ತದೆ. ಸಚಿವರು ಸಭೆ ಮಾಡುತ್ತಾರೆ ಅದರ ಔಟ್ ಕಮ್ ನೋಡುತ್ತೇವೆ. ಲಾಕ್ ಡೌನ್ ವಿಚಾರ ಕೇವಲ ಊಹಾಪೋಹಗಳು. ಆ ಪ್ರಶ್ನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.