ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ ಹಾಗೂ ಜಿಡಿ ಹರೀಶ್!
1 min readಮೈಸೂರು : ಚಾಮುಂಡಿ ಬೆಟ್ಟಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ಕೊಟ್ಟು ನಾಡದೇವಿಗೆ ಪೂಜೆ ಸಲ್ಲಿಸಿದ್ದಾರೆ. ನಿಖಿಲ್ಗೆ ಜಿಡಿ ಹರೀಶ್ಗೌಡ ಜೊತೆಯಾಗಿ ಪೂಜೆ ನೆರವೇರಿಸಿದ್ದಾರೆ. ಈಗಾಗಲೇ ಜೆಡಿಎಸ್ ತೊರೆಯದಂತೆ ಶತ ಪ್ರಯತ್ನ ಮಾಡ್ತಿರೋ ನಿಖಿಲ್, ಇಂದು ಕೂಡ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಜೆಡಿಎಸ್ನಿಂದ ದೂರ ಉಳಿದಿರೋ ಹರೀಶ್ ಗೌಡ, ಜಿಟಿಡಿ ಅವರನ್ನ ಕೊನೆಯ ಹಂತದ ಪ್ರಯತ್ನದಲ್ಲಿ ಪಕ್ಷದಲ್ಲೇ ಉಳಿಸಿಕೊಳ್ಳಲು ನಿಖಿಲ್ ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ.
ಸದ್ಯ ಇಂದು ಒಟ್ಟಾಗಿ ನಾಡದೇವಿಗೆ ಪೂಜೆ ಸಲ್ಲಿಕೆ ಮಾಡಿದ ಬಳಿಕ ದೇಗುಲದ ಒಳಗೆ ಪೂಜೆ ಬಳಿಕ ಹರೀಶ್ಗೌಡರನ್ನ ನಿಖಿಲ್, ಹಾಡಿ ಹೊಗಳಿದ್ದಾರೆ. ಹರೀಶ್ಗೆ ಶಕ್ತಿ ಇದೆ, ನಾವೇನು ಹೊಸದಾಗಿ ಆತನಿಗೆ ಕೊಡಬೇಕಿಲ್ಲ. ಎಲ್ಲವು ಮುಂದೆ ಸರಿಯಾಗುತ್ತೆ ಎಂದು ಮಾರ್ಮಿಕವಾಗಿ ಪಕ್ಷದಲ್ಲೇ ಇರ್ತಾರೆಂಬ ಸಂದೇಶ ಕೊಟ್ಟಿದ್ದಾರೆ. ಪೂಜೆ ಬಳಿಕ ಮಾತನಾಡಿದ ಹರೀಶ್, ನಾನು ನಿಖಿಲ್ ಅವರು ಸ್ನೇಹಿತರು, ಮೈಸೂರಿಗೆ ಬಂದಾಗ ಭೇಟಿಯಾಗುತ್ತಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದಿದ್ದಾರೆ.