ಲಾಡ್ಜ್ ರೂಂನಲ್ಲಿ ಚಿನ್ನಾಭರಣ, ಬೆಳ್ಳಿ, ನಗದು ಹಣ ಕಳುವು ಮಾಡಿದ್ದ ಇಬ್ಬರು ಆರೋಪಿಗಳ ಬಂಧನ

1 min read

ಮೈಸೂರು: ಲಾಡ್ಜ್ ರೂಂನಲ್ಲಿ ಚಿನ್ನಾಭರಣ, ಬೆಳ್ಳಿ ಪದಾರ್ಥ ಮತ್ತು ನಗದು ಹಣ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದಿನಾಂಕ ೧೯.೦೭.೨೦೨೨ ರಂದು ಲಕ್ಷ್ಮಿವಿಲಾಸ ರಸ್ತೆಯಲ್ಲಿ ಇರುವ ರಾಜ್ ಮಹಲ್ ಡಿಲೆಕ್ಸ್ ಲಾಡ್ಜ್ನ ರೂಂನಲ್ಲಿ ಚಿನ್ನಾಭರಣ, ಬೆಳ್ಳಿ ಪದಾರ್ಥ ಮತ್ತು ನಗದು ಹಣ ಕಳ್ಳತನವಾಗಿರುವ ಬಗ್ಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದ ತನಿಖೆ ಕೈಗೊಂಡ ದೇವರಾಜ ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳ ಮೇರೆಗೆ ದಿನಾಂಕ: ೨೧/೦೭/೨೦೨೨ ರಂದು ಒಬ್ಬ ಆರೋಪಿಯನ್ನು ಬಂಧಿಸಿ, ಈತನು ನೀಡಿದ ಮಾಹಿತಿ ಮೇರೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿಯನ್ನು ದಿನಾಂಕ: ೨೬/೦೭/೨೦೨೨ ರಂದು ಬಂಧಿಸಿ ವಿಚಾರ ಮಾಡಲಾಗಿ ಇಬ್ಬರು ಆರೋಪಿಗಳು ಸಂಚು ಮಾಡಿ ಪರಾರಿಯಾದಿಯವರ ಚಲನವಲನಗಳನ್ನು ಗಮನಿಸಿ, ಪರಾರಿಯಾದಿಯವರು ಲಾಡ್ಜ್ ರೂಂನಲ್ಲಿ ಇಲ್ಲದ ವೇಳೆ ಬಾಗಿಲನ್ನು ತೆಗೆದು ಒಳ ಹೋಗಿ ಚಿನ್ನಾಭರಣ, ಬೆಳ್ಳಿ ಮತ್ತು ನಗದು ಹಣವನ್ನು ಕಳುವು ಮಾಡಿರುವುದಾಗಿ ತಿಳಿಸಿದ ಮೇರೆಗೆ ಆರೋಪಿಗಳಿಂದ ರೂ. ೩೦,೧೮,೦೦೦/- ಮೌಲ್ಯದ ೬೨೧ ಗ್ರಾಂ ಚಿನ್ನಾಭರಣ, ೩೫೦ ಗ್ರಾಂ ಬೆಳ್ಳಿ ಪೂಜಾ ಬಟ್ಟಲು, ರೂ ೪೦,೦೦೦ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ೧ ಕಾರು ಮತ್ತು ೨ ಮೊಬೈಲ್ ಫೋನ್‌ಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ರವರಾದ ಶ್ರೀಮತಿ. ಗೀತ ಎಂ.ಎಸ್. ಐ.ಪಿ.ಎಸ್. ರವರು ಹಾಗೂ ದೇವರಾಜ ವಿಭಾಗದ ಎ.ಸಿ.ಪಿ.ರವರಾದ ಶ್ರೀ ಶಶಿಧರ.ಎಂ.ಎನ್ ರವರ ಮಾರ್ಗದರ್ಶನಲ್ಲಿ ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ದಿವಾಕರ್, ಪಿಎಸ್‌ಐರವರುಗಳಾದ ಶ್ರೀ ರಾಜು, ಶ್ರೀಮತಿ ಲೀಲಾವತಿ, ಮತ್ತು ಸಿಬ್ಬಂದಿಗಳಾದ ಸೋಮಶೆಟ್ಟಿ, ಸುರೇಶ್, ವೇಣುಗೋಪಾಲ್, ನಂದೀಶ್, ಪ್ರದೀಪ್ ರವರುಗಳು ಮಾಡಿರುತ್ತಾರೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.

About Author

Leave a Reply

Your email address will not be published. Required fields are marked *