ಮಾತಿಗೆ ತಪ್ಪಿದ್ದೇನೆ ಕ್ಷಮಿಸಿ- ಪ್ರತಾಪ್ ಸಿಂಹ!
1 min readಜುಲೈನಲ್ಲಿ ಬೆಂಗಳೂರು-ನಿಡಘಟ್ಟ ರಸ್ತೆಯನ್ನು ಸಂಚಾರಕ್ಕೆ ತೆರವು ಮಾಡಿಸುತ್ತೇನೆ ಎಂದಿದ್ದೆ, ನಂತರ ಆಗಸ್ಟ್ 15 ರಂದು ಬಿಡದಿ, ರಾಮನಗರ-ಚನ್ನಪಟ್ಟಣ ಬೈಪಾಸ್ ಓಪನ್ ಮಾಡುತ್ತೇವೆ ಎಂದೆ. ಆದರೆ ಈಗ ಮಾತಿಗೆ ತಪ್ಪಿದ್ದೇನೆ, ದಯವಿಟ್ಟು ಕ್ಷಮಿಸಿ. ಎಲ್ಲ ಪ್ರಯತ್ನಗಳ ನಡುವೆಯೂ ಇನ್ನೂ ವಾರ, ಹತ್ತು ದಿನಗಳ ಕೆಲಸ ಬಾಕಿಯಿದೆ. ಗುಡ್ಡ ಕಡಿದು ರಸ್ತೆ ನಿರ್ಮಾಣ ನಡೆಯುತ್ತಿದೆ, ಸ್ವಲ್ಪ ಕಾಲಾವಕಾಶ ನೀಡಿ, ಪ್ಲೀಸ್. ಈಗಂತ ಸ್ವತಹ ಸಂಸದ ಪ್ರತಾಪ್ ಸಿಂಹ ಸಂದೇಶ ಹಂಚಿಕೊಂಡಿದ್ದು, ಸಂಸದರ ಈ ಮಾತಿಗೆ ಕೆಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆಗದಿದ್ದರು, ಅದನ್ನ ಮಾಹಿತಿ ತಿಳಿಸಿದ್ದಿರಿ. ಕೆಲವರು ಕೆಲಸವೇ ಮಾಡದೆ ನಾಟಕ ಮಾಡುತ್ತಾರೆಂದು ಹೇಳಿದ್ದಾರೆ. ಇದರಿಂದ ಇನ್ನೆರಡು ವಾರದಲ್ಲಿ ಈ ಕೆಲಸಗಳು ಆಗುವ ಸಾಧ್ಯತೆಗಳಿವೆ.