ಭೀಕರ ರಸ್ತೆ ಅಪಘಾತ 10 ಮಂದಿ ದುರ್ಮರಣ!
1 min readಭೀಕರ ರಸ್ತೆ ಅಪಘಾತ 10 ಮಂದಿ ದುರ್ಮರಣ
ನರಸೀಪುರ:- ಮಲೆ ಮಹದೇಶ್ವರ ಸ್ವಾಮಿ ಬೆಟ್ಟದಿಂದ ಮೈಸೂರಿನ ಕಡೆ ತೆರಳುತ್ತಿದ್ದ ಇನ್ನೋವಾ ಕಾರು ಹಾಗೂ ಮೈಸೂರಿನಿಂದ ಕೊಳ್ಳೇಗಾಲದ ಕಡೆ ಬರುತ್ತಿದ್ದ ಖಾಸಗಿ ಬಸ್ ಗೆ ಕುರುಬೂರು ಸಮೀಪ ಮುಖಾಮುಖಿ ಡಿಕ್ಕಿಯಾಗಿ 10 ಜನರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಇನ್ನು ಭೀಕರ ಅಪಘಾತದಲ್ಲಿ ಸಾವಿಗೀಡಾಗಿರುವವರು ಬಳ್ಳಾರಿ ಮೂಲದವರು ಎಂದು ತಿಳಿದುಬಂದಿದೆ. ಕಬ್ಬು ಕಟಾವು ಮಾಡುವ ಕೂಲಿ ಆರಸಿ ಬಳ್ಳಾರಿಯಿಂದ ಮೈಸೂರಿನ ಕಡೆ ಬಂದಿದ್ದ ಬಡ ಜೀವಿಗಳು ಬಾರದ ಲೋಕಕ್ಕೆ ತೆರಳಿವೆ. ಬಾಡಿಗೆ ವಾಹನದ ಮೂಲಕ ಮಹದೇಶ್ವರ ಬೆಟ್ಟಕ್ಕೆ ದೇವಸ್ಥಾನಕ್ಕೆ ತೆರಳಿ ಪೂಜಿ ಸಲ್ಲಿಸಿ ಮೈಸೂರಿನ ಕಡೆ ಹಿಂತಿರುಗುವಾಗ ನರಸೀಪುರ ತಾಲೂಕಿನ ಕುರುಬೂರು ಸಮೀಪದಲ್ಲಿ ಈ ಘಟನೆ ನಡೆದಿದೆ. ಕಾರು ಸಂಪೂರ್ಣ ನಜ್ಜು ಗುಜ್ಜಗಿದೆ.
ಕಾರು ಮತ್ತು ಬಸ್ಸು ಅತೀ ವೇಗದ ಚಾಲನೆ ಕಾರಣ ಎಂದು ತಿಳಿದು ಬಂದಿದೆ.ಇನ್ನು ಸ್ಥಳೀಯ ಪೊಲೀಸ್ ಠಾಣಿಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿಸಿ ರಾಜೇಂದ್ರ ಅವರು ಸ್ಥಳ ಪರಿಶೀಲನೆ ನಡೆಸುತ್ತಿರುವುದು-
ಬಸ್ ಮತ್ತು ಕಾರು ನಡುವೆ ಅಪಘಾತ ಪ್ರಕರಣ.
ಘಟನೆ ಸ್ಥಳಕ್ಕೆ ಡಿಸಿ ಡಾ ಕೆವಿ ರಾಜೇಂದ್ರ ಭೇಟಿ.
ಪೋಲೀಸ್ ಅಧಿಕಾರಿಗಳ ಬಳಿ ಮಾಹಿತಿ ಪಡೆದ ಡಿಸಿ.
ಘಟನಾ ವಿವರವನ್ನ ಸರ್ಕಾರಕ್ಕೆ ತಿಳಿಸಿದ ಡಿಸಿ.
ದೂರವಾಣಿ ಕರೆ ಮೂಲಕ ಮಾಹಿತಿ ರವಾನೆ.
ಬಸ್ ಮತ್ತು ಕಾರು ನಡುವೆ ಅಪಘಾತ ಪ್ರಕರಣದಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ. ಇದೇವೇಳೆ ಮೃತ ಕುಟುಂಬಕ್ಕೆ ತಲಾ 2ಲಕ್ಷ ಪರಿಹಾರ ಘೋಷಣೆ ಮಾಡಿ ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದಾರೆ.