ಕೇಂದ್ರ ಸರ್ಕಾರದ ಬೇಜವಬ್ದಾರಿಗೆ ನವೀನ್ ಬಲಿಯಾಗಿದ್ದಾರೆ- ಮಾಜಿ ಶಾಸಕ ಸೋಮಶೇಖರ್ ಆರೋಪ!
1 min readಕೇಂದ್ರ ಸರ್ಕಾರದ ಬೇಜವಬ್ದಾರಿಗೆ ನವೀನ್ ಬಲಿಯಾಗಿದ್ದಾರೆ.
ಆಪರೇಷನ್ ಗಂಗಾ ಹೆಸರಲ್ಲಿ ರೆಸ್ಕ್ಯೂ ಮಾಡ್ತೀವಿ ಅಂತಾರೆ.
ಇಪ್ಪತ್ತು ಮೂವತ್ತು ಮಂದಿಯನ್ನ ಕರೆತಂದು ಮುನ್ನೂರು ನಾನೂರು ವಿದ್ಯಾರ್ಥಿಗಳನ್ನ ರಕ್ಷಣೆ ಮಾಡಿದ್ದೀವಿ ಅಂತಾರೆ.
ಇವರಿಂದ ಪೋಷಕರು ಆತಂಕಕ್ಕೆ ದೂಡುವಂತೆ ಮಾಡಿದೆ.
ಸರ್ಕಾರ ಮುನ್ಸೂಚನೆ ಸಿಕ್ಕ ವೇಳೆಯೇ ಕ್ರಮ ಕೈಗೊಳ್ಳಬೇಕಿತ್ತು.
ಆದರೆ ಅಲ್ಲಿ ವಿದ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ.
ವಿದ್ಯಾರ್ಥಿಗಳ ರಕ್ಷಣೆಯಲ್ಲಿ ಕೇವಲ ಕೇಂದ್ರ ಸರ್ಕಾರ ಪ್ರಚಾರ ತೆಗೆದುಕೊಳ್ಳುತ್ತಿದೆ.
ಎರಡು ದಿನದಿಂದೆ ಮಾತ್ರ ಕೇಂದ್ರ ಸರ್ಕಾರ ಆಕ್ಟೀವ್ ಆಗಿದೆ.
ಆದರೆ ಇದೆಲ್ಲವು ಯುದ್ದದ ಮುನ್ನವೇ ಆಗಬೇಕಿತ್ತು.
ಆದರೆ ಸರ್ಕಾರ ಯಾವುದೇ ಎಕ್ಸ್ಪರ್ಟ್ಗಳ ಜೊತೆ ಸಭೆ ಮಾಡಿಲ್ಲ.
ಇದರಿಂದ ಇನ್ನು 16 ಸಾವಿರದಷ್ಟು ವಿದ್ಯಾರ್ಥಿಗಳು ಅಲೆ ಸಿಲುಕಿದ್ದಾರೆ.
ಅಲ್ಲಿನ ವಿದ್ಯಾರ್ಥಿಗಳ ಸಮಸ್ಯೆ ನಿತ್ಯವೂ ಸೋಶಿಯಲ್ ಮಿಡಿಯಾ, ಮಾಧ್ಯಮದಲ್ಲಿ ಬರುತ್ತಿದೆ.
ಆದರು ಸರಿಯಾದ ಕ್ರಮ ಕೈಗೊಂಡಿಲ್ಲ.
ಈಗಲಾದರು ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಲಿ.
ಅಲ್ಲಿನ ವಿದ್ಯಾರ್ಥಿಗಳು ಇಲ್ಲಿ ಬಂದ ಬಳಿಕ ಅವರಿಗೆ ವಿದ್ಯಾಭ್ಯಾಸ ನೀಡಲಿ.
ವಿದ್ಯಾಭ್ಯಾಸ ಸಮಸ್ಯೆ ಆದವರಿಗೆ ಈ ಕ್ರಮಕೈಗೊಳ್ಳಿ ಎಂದು ಒತ್ತಾಯ ಮಾಡುತ್ತೇನೆ.
ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿಕೆ.